ಕೇರಳದಲ್ಲಿ ಮಳೆ ಕೊಂಚ ಬಿಡುವು : 2 ದಿನದಲ್ಲಿ ಕೊಚ್ಚಿ ವಿಮಾನ ಹಾರಾಟ ಶುರು

Published : Aug 20, 2018, 10:22 PM ISTUpdated : Sep 09, 2018, 09:46 PM IST
ಕೇರಳದಲ್ಲಿ ಮಳೆ ಕೊಂಚ ಬಿಡುವು : 2 ದಿನದಲ್ಲಿ ಕೊಚ್ಚಿ ವಿಮಾನ ಹಾರಾಟ ಶುರು

ಸಾರಾಂಶ

ಕೇರಳದ ಚೆಂಗನೂರು ಸಂಪೂರ್ಣ ಜಲಾವೃತಗೊಂಡಿದ್ದು, ಪಾಲಕ್ಕಾಡ್ ನಲ್ಲಿಯೂ ರಸ್ತೆ, ಸೇತುವೆ ಕೊಚ್ಚಿ ಹೋಗಿದೆ.  ತಾತ್ಕಾಲಿಕ ಸೇತುವೆ ಮೂಲಕ ನಿರಾಶ್ರಿತರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. 

ಕೊಚ್ಚಿ[ಆ.20]: ಕೇರಳದಲ್ಲಿ ವರುಣ ಸ್ವಲ್ಪ ಬಿಡುವು ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಸಮಾರೋಪಾದಿಯಲ್ಲಿ ಸಾಗುತ್ತಿದೆ. ಸ್ಥಗಿತವಾಗಿದ್ದ ರೈಲು ಪುನಾರಂಭವಾಗಿದ್ದು, ಇನ್ನೆರಡು ದಿನದಲ್ಲಿ ಕೊಚ್ಚಿಯಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.

ಕಳೆದ 12 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಹುತೇಕ ಜಿಲ್ಲೆಗಳು ಜಲಾವೃತಗೊಂಡಿದೆ. ರಕ್ಷಣೆಗಾಗಿ ಜನರು ಮೊರೆ ಇಡುತ್ತಿರುವ ದೃಶ್ಯ ಎಂತಹವರ ಮನ ಕಲಕುವಂತಿದೆ. ರಕ್ಷಣಾ ಸಿಬ್ಬಂದಿ ಈವರಗೆ 3,400ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು ರಕ್ಷಣಾ ಕಾರ್ಯ ಸಮಾರೋಪಾದಿಯಲ್ಲಿ ನಡೆಯುತ್ತಿದೆ. 

ಕೇರಳದ ಚೆಂಗನೂರು ಸಂಪೂರ್ಣ ಜಲಾವೃತಗೊಂಡಿದ್ದು, ಪಾಲಕ್ಕಾಡ್ ನಲ್ಲಿಯೂ ರಸ್ತೆ, ಸೇತುವೆ ಕೊಚ್ಚಿ ಹೋಗಿದೆ.  ತಾತ್ಕಾಲಿಕ ಸೇತುವೆ ಮೂಲಕ ನಿರಾಶ್ರಿತರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕೊಚ್ಚಿ, ಅಳುವಾ, ಇಡುಕ್ಕಿಯ ವಂಡಿಪೆರಿಯಾರ್ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ನಲ್ಲಿ  ಪ್ರವಾಹಪೀಡಿತರಿಗೆ ಆಹಾರ ಪೊಟ್ಟಣ, ಮೆಡಿಸಿನ್, ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. 

ತಿರುವನಂತಪುರದಲ್ಲಿ ರೈ ಸಂಚಾರ ಆರಂಭ
ತಿರುವನಂತಪುರಂ ಮತ್ತು ಎರ್ನಾಕುಲಂ ನಡುವಿನ ರೈಲು ಸಂಚಾರ ಮತ್ತೆ ಆರಂಭವಾಗಿದೆ.  ತಿರುವನಂತಪುರದಿಂದ ಚೆನ್ನೈ,  ಮುಂಬೈ, ಬೆಂಗಳೂರು ಮತ್ತು  ದೆಹಲಿ ಮಾರ್ಗದಲ್ಲಿ ರೈಲು ಸಂಚಾರ ಶುರುವಾಗಿದೆ. ಮಳೆ ನಿಂತರೂ ಮನೆಯಿಲ್ಲದವರಿಗೆ ಪುನರ್ವಸತಿ ಕಲ್ಪಿಸುವುದು ರೋಗರುಜಿನಗಳನ್ನು ತಡೆಗಟ್ಟುವುದು  ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!