
ರಾಮನಗರ(ಆ.20): ಬ್ಯಾಂಕ್ ಅಕೌಂಟ್ ಹಾಗೂ ಎಟಿಂ ಕಾರ್ಡ್ಗಳನ್ನ ದುರ್ಬಳಕೆ ಮಾಡಿಕೊಳ್ಳೋ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೀಗ ಖ್ಯಾತ ರೇಡಿಯೋ ಜಾಕಿ ಶೃತಿ ಬ್ಯಾಂಕ್ ಅಕೌಂಟ್ಗೆ ಕನ್ನ ಹಾಕಿರುವ ದುಷ್ಕರ್ಮಿಗಳು 30 ಸಾವಿರ ರೂಪಾಯಿ ಹಣ ಡ್ರಾ ಮಾಡಿದ್ದಾರೆ.
ಸ್ಕ್ಮಿಮ್ಮಂಗ್ ಮಿಷಿನ್ ಬಳಸಿ ಆರ್ಜೆ ಶೃತಿ ಎಟಿಂ ಕಾರ್ಡ್ ದುರ್ಬಳಕೆ ಮಾಡಿದ್ದಾರೆ. ಈ ಮೂಲಕ ರಾಮನಗರದ ಕೆನರಾ ಬ್ಯಾಕ್ ಎಟಿಎಂನಿಂದ 30 ಸಾವಿರ ರೂಪಾಯಿಯನ್ನ ಖದೀಮರು ಡ್ರಾ ಮಾಡಿದ್ದಾರೆ.ಕಳೆದ ಶನಿವಾರ ರಾತ್ರಿ ಶೃತಿ ಅಕೌಂಟ್ ನಲ್ಲಿ ಹಣ ಡ್ರಾ ಆಗಿರುವ ಬಗ್ಗೆ ಶೃತಿಗೆ ಮಾಹಿತಿ ಸಿಕ್ಕಿದೆ.
ಎಟಿಎಂ ಕಾರ್ಡ್ ದುರ್ಬಳಕೆ ಪ್ರಕಣ ಸಂಬಂಧ ಶೃತಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ