ಮಧುಮೇಹ ತೀವ್ರ: ಕೇಜ್ರಿವಾಲ್'ಗೆ ಮತ್ತೆ ಬೆಂಗ​ಳೂ​ರಲ್ಲಿ ಚಿಕಿ​ತ್ಸೆ

Published : Feb 06, 2017, 07:10 AM ISTUpdated : Apr 11, 2018, 01:00 PM IST
ಮಧುಮೇಹ ತೀವ್ರ: ಕೇಜ್ರಿವಾಲ್'ಗೆ ಮತ್ತೆ ಬೆಂಗ​ಳೂ​ರಲ್ಲಿ ಚಿಕಿ​ತ್ಸೆ

ಸಾರಾಂಶ

ನಾಳೆ ಆಗಮನ | 10-12 ದಿನ ಶುಶ್ರೂಷೆ ಸಾಧ್ಯತೆ

ನವದೆಹಲಿ: ಕಳೆದ 2 ತಿಂಗ​ಳಿಂದ ಪಂಜಾಬ್‌ ಹಾಗೂ ಗೋವಾ ವಿಧಾ​ನ​ಸ​ಭೆ ಚುನಾ​ವ​ಣೆ​ಗಾಗಿ ವಿಶ್ರ​ಮಿ​ಸದೇ ಪ್ರಚಾರದಲ್ಲಿ ನಿರ​ತ​ರಾ​ಗಿದ್ದ ದೆಹಲಿ ಮುಖ್ಯ​ಮಂತ್ರಿ ಅರ​ವಿಂದ ಕೇಜ್ರಿ​ವಾಲ್‌ ಅವರು ಇದೀಗ ಅನಾ​ರೋ​ಗ್ಯ​ಕ್ಕೀ​ಡಾ​ಗಿ​ದ್ದಾರೆ.
ದಿಲ್ಲಿಯಿಂದ ವಿವಿಧ ರಾಜ್ಯಗಳಿಗೆ ಚುನಾವಣೆ ಪ್ರಚಾ​ರಕ್ಕೆ ತೆರಳಿದ ಪರಿಣಾಮ ಅವರ ಆಹಾರದಲ್ಲಿ ವ್ಯತ್ಯಯವಾ​ಗಿದ್ದು, ಅವರ ರಕ್ತ​ದ​ಲ್ಲಿನ ಸಕ್ಕರೆ ಪ್ರಮಾಣ ಏಕಾ​ಏಕಿ ಏರಿ​ಕೆ​ಯಾ​ಗಿದೆ. ಹೀಗಾಗಿ ಅವರೀಗ ದಿನಕ್ಕೆ ಮೂರು ಬಾರಿ ಇನ್ಸು​ಲಿನ್‌ ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಆಮ್‌ಆದ್ಮಿ ಪಕ್ಷ ಬಹುವಾಗಿ ನಂಬಿರುವ ಪಂಜಾಬ್‌ ಮತ್ತು ಗೋವಾದಲ್ಲಿ ಮತದಾನ ಮುಗಿದಿರುವ ಹಿನ್ನೆಲೆಯಲ್ಲಿ ಅವರು ತುರ್ತು ಚಿಕಿತ್ಸೆಗೆ ನಿರ್ಧರಿಸಿದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಅವರು ಚಿಕಿ​ತ್ಸೆ​ಗಾಗಿ ಮಂಗ​ಳ​ವಾ​ರವೇ ಬೆಂಗ​ಳೂ​ರಿಗೆ ತೆರ​ಳ​ಲಿ​ದ್ದಾರೆ. ಫೆ.7ರಿಂದ ಸುಮಾರು 10-12 ದಿನ​ಗಳ ಕಾಲ ಬೆಂಗ​ಳೂ​ರಿ​ನಲ್ಲಿ ಪ್ರಕೃತಿ ಚಿಕಿ​ತ್ಸೆ​ಗೆ (​ನ್ಯಾಚು​ರೋ​ಪ​ತಿ) ಅವರು ಒಳ​ಗಾ​ಗ​ಲಿ​ದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ಮೂಲ​ಗಳು ತಿಳಿ​ಸಿ​ವೆ.
ಕೇಜ್ರಿವಾಲ್‌ ಚಿಕಿತ್ಸೆಗಾಗಿ ಬೆಂಗಳೂರಿಗೆ ಭೇಟಿ ನೀಡುತ್ತಿರುವುದು ಇದು 4ನೇ ಬಾರಿ. ಈ ಹಿಂದೆ 2015ರ ಮಾ.5ರಂದು ಜಿಂದಾಲ್‌ ನ್ಯಾಚು​ರೋ​ಪ​ತಿ ಇನ್ಸಿ$್ಟಟ್ಯೂಟ್‌ಗೆ ದಾಖಲಾಗಿ ಕೆಮ್ಮಿಗೆ ಚಿಕಿತ್ಸೆ ಪಡೆದಿದ್ದರು. ಬಳಿಕ 2016ರ ಜ.30ರಂದು ಕೆಮ್ಮು ಮತ್ತು ಸಕ್ಕರೆ ಕಾಯಿಲೆಯ ಚಿಕಿತ್ಸೆಗಾಗಿ ಜಿಂದಾಲ್‌ ನ್ಯಾಚು​ರೋ​ಪ​ತಿ ಇನ್ಸ್ಟಿಟ್ಯೂಟ್‌ಗೆ ಮತ್ತೊಮ್ಮೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. 2016ರ ಸೆ.15ರಂದು ಬೆಂಗಳೂರಿನ ಮಜುಂದಾರ್‌ ಶಾ ಕ್ಯಾನ್ಸರ್‌ ಸೆಂಟರ್‌ನಲ್ಲಿ ಕೆಮ್ಮಿಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಕಿರುನಾಲಿಗೆ ಚಿಕಿತ್ಸೆ ನೆರವೇರಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಹೂದಿಗಳ 'ಬೆಳಕಿನ ಹಬ್ಬ'ದಂದೇ ಭಯೋತ್ಪಾದಕ ದಾಳಿ! ಹನುಕ್ಕಾ ಫೆಸ್ಟಿವಲ್ ಮಹತ್ವ, ಇತಿಹಾಸ ತಿಳಿಯಿರಿ
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!