
ಜೈಪುರ (ಫೆ.06): ಮದುವೆಗಾಗಿ ಹಾಫ್-ಮ್ಯಾರಥಾನ್ ಕನಸನ್ನು ಬಿಟ್ಟುಬಿಡಲು ಒಲ್ಲದ ಬೆಂಗಳೂರಿನ ಅನಂತ್ ತ್ರಿವೇದಿ ನುಡಿದಂತೆಯೇ ನಡೆದಿದ್ದಾರೆ.
ಜೈಪುರದಲ್ಲಿ ಮ್ಯಾರಥಾನ್ನ ಫಿನಿಶಿಂಗ್ ಲೈನ್ನಲ್ಲೇ ಅವರು ತಮ್ಮ ಸ್ನೇಹಿತೆ ಕವಿತಾ ಬಾತ್ರಾರನ್ನು ವರಿಸಿದ್ದಾರೆ. ಜೈಪುರದ ಹಾಫ್ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ ಉದ್ಯಮಿ ತ್ರಿವೇದಿ ಅವರು ಮ್ಯಾರಥಾನ್ನ ಫಿನಿಶಿಂಗ್ ಲೈನ್ನಲ್ಲಿ ತನಗಾಗಿ ಹಾರ ಹಿಡಿದು ಕಾಯುತ್ತಿದ್ದ ಕವಿತಾ(28)ರನ್ನು ಮದುವೆಯಾದರು.
ಮ್ಯಾರಥಾನ್ನ ಓಟವನ್ನು ಮುಗಿಸುತ್ತಿದ್ದಂತೆಯೇ, ಹೊಸ ಬದುಕಿನ ಓಟವನ್ನು ಶುರುವಿಟ್ಟುಕೊಂಡರು. ಈ ಜೋಡಿ, ಮದುವೆ ದಿನವೇ ಮ್ಯಾರಥಾನ್ ಇದ್ದ ಕಾರಣ ಫಿನಿಶಿಂಗ್ ಲೈನ್ನಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ವಧು-ವರರ ಸ್ನೇಹಿತರು, ಇತರೆ ಮ್ಯಾರಥಾನ್ ಓಟಗಾರರು ಈ ವಿವಾಹಕ್ಕೆ ಸಾಕ್ಷಿಯಾದರು. ಅನಂತ್ ಬೆಂಗಳೂರಿನಲ್ಲಿ ಸ್ವಂತ ಉದ್ಯೊಗ ಹೊಂದಿದ್ದರೆ, ಕವಿತಾ ಐಟಿ ಉದ್ಯೋಗದಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.