
ಮಂಡ್ಯ : ಮಂಡ್ಯದಲ್ಲಿ ಅಂಬರೀಷ್ ವಿರುದ್ದ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿಂದ ಶಾಸಕರಾಗಿದ್ದ ಅಂಬರೀಶ್ ಗೆ ಎಚ್ಚರಿಕೆ ಬಂದಿದೆ. ಅಂಬರೀಶ್ ಕೆಪಿಸಿಸಿ ಹಾಗೂ ಹೈಕಮಾಂಡ್ ಅನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಚಾಮುಂಡೇಶ್ವರಿ ಯಲ್ಲಿ ಒಕ್ಕಲಿಗರ ಮತ ಸೆಳೆಯಲು ಪ್ರಚಾರಕ್ಕೆ ಬರ್ತೇನೆ ಎಂದು ಸಿಎಂ ಸಿದ್ದರಾಮಯ್ಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಕೆಪಿಸಿಸಿ ನನ್ನ ಕಡೆಗಣಿಸಿದೆ ಎಂದು ಅಂಬರೀಶ್ ಹೇಳುತ್ತಾರೆ. ಆದರೆ ಮಂಡ್ಯದಲ್ಲಿ ಅಂಬರೀಶ್ ಗೆಲುವಿಗೆ ಕಳೆದ ಬಾರಿ ದುಡಿದವರನ್ನು ಮೂಲೆಗುಂಪು ಮಾಡಿದ್ದಾರೆ.
ಅಂಬರೀಶ್ ಗೆ ಅನಾರೋಗ್ಯ ಇದ್ದರೂ ಏಕೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಿಮ್ಮ ಬೆಂಬಲಿಗನಿಗೆ ಟಿಕೆಟ್ ಕೊಡಿಸಿ ತಾಕತ್ತಿದ್ದರೆ ಮಂಡ್ಯದಿಂದ ಗೆಲ್ಲಿಸಿಕೊಂಡು ಬನ್ನಿ. ಅಂಬರೀಶ್ ಟಿಕೆಟ್ ತಂದು ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಗೆಲ್ಲುತ್ತಾ ಬರುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಂಬರೀಶ್ ಗೆ ಟಿಕೆಟ್ ಕೊಟ್ಟರೆ ನಾವು ಬಂಡಾಯ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ಆನಂದ್ ಹೇಳಿದ್ದಾರೆ.
ಅಂಬರೀಶ್ ಶಾಸಕರಾಗಿ ಅಧಿಕಾರ ಸೌಲಭ್ಯವನ್ನ ಬೆಂಬಲಿಗನಿಗೆ ಹಸ್ತಾಂತರ ಮಾಡುತ್ತಾರೆ. ಕ್ಷೇತ್ರಕ್ಕೆ ಬಾರದ ಅಂಬರೀಶ್’ ಗೆ ಏಕೆ ಟಿಕೆಟ್ ಕೊಡಬೇಕು ಅದರ ಬದಲು ನಿಷ್ಟಾವಂತರಿಗೆ ಕೊಡಿ. ಸ್ವಪಕ್ಷೀಯ ಮಾಜಿ ಶಾಸಕನ ವಿರುದ್ಧ ಇದೀಗ ಕೆಬ್ಬಳ್ಳಿ ಆನಂದ್ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.