
ನವದೆಹಲಿ(ಅ.04): ಕೊನೆಗೂ ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನ ಅಕ್ಟೋಬರ್ 18ರವರೆಗೆ ಸುಪ್ರೀಂಕೋರ್ಟ್ ಮುಂದೂಡಿದೆ. ನಿರ್ವಹಣಾ ಮಂಡಳಿ ರಚನೆ ಅಧಿಕಾರ ಸುಪ್ರೀಂಕೋರ್ಟ್`ಗೆ ಇಲ್ಲ ಎಂಬ ಅಟಾರ್ನಿ ಜನರಲ್ ವಾದವನ್ನ ಆಲಿಸಿದ ಕೋರ್ಟ್, ಸದ್ಯಕ್ಕೆ ಆ ಆದೇಶವನ್ನ ಮುಂದೂಡುವುದಾಗಿ ಹೇಳಿದೆ.
ಮೇಲುಸ್ತುವಾರಿ ಸಮಿತಿ ಇನ್ನೂ ಜೀವಂತವಾಗಿದೆ. ಈ ಸಮಿತಿ ಅ.7ರಿಂದ ಅ.17ರವರೆಗೆ ಅಧ್ಯಯನ ಮಾಡಲಿ, ಕರ್ನಾಟಕ, ತಮಿಳುನಾಡಿಗೆ ತೆರಳಿ ವಸ್ತು ಸ್ಥಿತಿ ಅಧ್ಯಯನ ಮಾಡಲಿ. ಅ.17ರಂದು ಸುಪ್ರೀಂಕೋರ್ಟ್ಗೆ ವರದಿ ನೀಡಲಿ, ಅ.18ರಂದು ಈ ಬಗ್ಗೆ ವಿಚಾರಣೆ ಮಾಡುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.