
ಬೆಂಗಳೂರು(ವಿಧಾನಪರಿಷತ್): ವಿ.ಎಸ್. ಉಗ್ರಪ್ಪ ಮಂತ್ರಿ ಆಗಬಹುದಿತ್ತು, ಆದರೆ ಇತ್ತೀಚಿನ ಬೆಳವಣಿಗೆಗಳು ಈ ಅವಕಾಶವನ್ನು ತಪ್ಪಿಸಿವೆ ಎಂಬ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳುವ ಮೂಲಕ ಸ್ವಾರಸ್ಯಕರ ಚರ್ಚೆಯೊಂದಕ್ಕೆ ನಾಂದಿ ಹಾಡಿದರು.
ಬರದ ಮೇಲೆ ಈಶ್ವರಪ್ಪ ಚರ್ಚಿಸುವ ವೇಳೆ ಪ್ರಾಸಂಗಿಕವಾಗಿ ಅಧಿವೇಶನ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದರಿಂದ ಅನೇಕ ಸದಸ್ಯರು ಯಾವಾಗ ಅಧಿವೇಶನ ಮುಗಿಯುತ್ತದೆ ಎಂದು ಕಾಯುವಂತಾಗಿದೆ. ಉಗ್ರಪ್ಪ ಅವರು ಸಹ ಮಂತ್ರಿ ಆಗಬಹುದಿತ್ತು. ಆದರೆ ಇತ್ತೀಚೆಗೆ ನಡೆದ ಬೆಳವಣಿಗೆ ಅವರನ್ನು ಮಂತ್ರಿ ಆಗದಂತೆ ಕಟ್ಟಿಹಾಕಿವೆ ಎಂದು ಮಾತಿನಿಂದ ಚಿವುಟಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.