ಶಾಸಕರು ರಾಜೀನಾಮೆ ನೀಡುತ್ತಿದ್ದರೂ ಕುಮರಸ್ವಾಮಿ ಕೂಲ್ ಕೂಲ್| ಎಚ್ಡಿಕೆ ವಿಶ್ವಾಸ ಕಂಡು ಒಮರ್ ಅಬ್ದುಲ್ಲಾಗೆ ಅಚ್ಚರಿ|
ಶ್ರೀನಗರ[ಜು.09]: ಕರ್ನಾಟದಲ್ಲಿ ಮೈತ್ರಿ ಸರ್ಕಾರ ಉರುಳಿ ಬೀಳುವುದು ಇನ್ನೇನು ಖಚಿತ ಎನ್ನುತ್ತಿರುವಾಗಲೇ, ಸರ್ಕಾರಕ್ಕೆ ಏನೂ ಆಗಲ್ಲ. ಮೈತ್ರಿ ಸರ್ಕಾರ ಸುಗಮವಾಗಿ ನಡೆಯುತ್ತದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸದ ನಡೆಗೆ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
This is some serious confidence on display here! What does he know that NO one else seems to know 🤔 https://t.co/WAzFZy7LQv
— Omar Abdullah (@OmarAbdullah)ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಸುಗಮ ಆಡಳಿತದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾರಿಗೂ ತಿಳಿಯದ ವಿಷಯ ಇವರಿಗೆ ಮಾತ್ರ ಹೇಗೆ ಗೊತ್ತು? ಎಂದು ಟ್ವೀಟ್ ಮಾಡಿದ್ದಾರೆ.