
ಬೆಂಗಳೂರು[ಜು. 12] ಮಳೆಗಾಲದ ವಿಧಾನಸಭಾ ಅಧಿವೇಶನದ ಮೊದಲನೆ ದಿನ ಅಂತ್ಯವಾಗಿದೆ. ಶಾಸಕರು ಚುಕ್ಕೆ ಗುರುತಿನ ಪ್ರಶ್ನೆ ಹುಡುಕುವ ಬದಲು ರೆಸಾರ್ಟ್ ಸೇರಿದ್ದಾರೆ. ಅವರ ಮಾತೃಪಕ್ಷಗಳೆ ಅವರನ್ನು ಕರೆದುಕೊಂಡು ಹೋಗಿವೆ.
ಕ್ಷೇತ್ರ ಬಿಟ್ಟ ಪ್ರತಿನಿಧಿಗಳಿಗೆ ಈಗ ರೆಸಾರ್ಟ್ ಗಳೆ ಕಾರ್ಯಕ್ಷೇತ್ರ. ವಿಪ್ ನ್ನು ಪಡೆದುಕೊಂಡಿರುವ ಶಾಸಕರು ಎಲ್ಲೆಲ್ಲಿ ಇದ್ದಾರೆ?
ಮೂರೂ ಪಕ್ಷದ ಶಾಸಕರಿಗೆ ಮೂಗುದಾರ...ಅಷ್ಟಕ್ಕೂ ವಿಪ್ ಅಂದ್ರೇನು?
1. ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರು ಮುಂಬೈನ ಖಾಸಗಿ ಹೊಟೆಲ್ ನಲ್ಲಿ ಉಳಿದುಕೊಂಡಿದ್ದಾರೆ.
2. ಪಕ್ಷದಲ್ಲೇ ಉಳಿದುಕೊಂಡಿರುವ ಕಾಂಗ್ರೆಸ್ ಶಾಸಕರು ದೇವನಹಳ್ಳಿ ಸಮೀಪದ ರೆಸಾರ್ಟ್ ನಲ್ಲಿ ಮುಂದಿನ ತಂತ್ರ ಸಿದ್ಧ ಮಾಡುತ್ತಿದ್ದಾರೆ.
3. ಬಿಜೆಪಿ ಶಾಸಕರು ಬೆಂಗಳೂರಿನ ಯಲಹಂಕ ಸಮೀಪದಲ್ಲಿ ತಮ್ಮ ವಾಸ್ತವ್ಯ ಮಾಡಿಕೊಂಡಿದ್ದಾರೆ.
4. ಜೆಡಿಎಸ್ ಶಾಸಕರಿಗೆ ನಂದಿ ಗಿರಿಧಾಮದ ಸಮೀಪದಲ್ಲಿನ ರೆಸಾರ್ಟ್ ನಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.