ಕರ್ನಾಟಕದ 43 ಶಾಸಕರು, 21 MLCಗಳಿಗೆ ಲೋಕಾಯುಕ್ತ ನೋಟಿಸ್

Published : Sep 01, 2019, 05:37 PM IST
ಕರ್ನಾಟಕದ 43 ಶಾಸಕರು, 21 MLCಗಳಿಗೆ ಲೋಕಾಯುಕ್ತ ನೋಟಿಸ್

ಸಾರಾಂಶ

2018-19ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದ ಜನಪ್ರನಿಧಿಗಳ ಹೆಸರುಗಳನ್ನು ಕರ್ನಾಟಕ ಲೋಕಾಯುಕ್ತ ಪಿ ವಿಶ್ವನಾಥ ಶೆಟ್ಟಿ ಅವರು ಪ್ರಕಟಿಸಿದ್ದಾರೆ. ಪಟ್ಟಿಯಲ್ಲಿ 43 ಶಾಸಕರು, 21 ವಿಧಾನಪರಿಷತ್ ಸದಸ್ಯರುಗಳ ಹೆಸರುಗಳಿದ್ದು, ಇವರೆಲ್ಲರಿಗೆ ನೋಟಿಸ್ ನೀಡಲಾಗಿದೆ.  ಹಾಗಾದ್ರೆ ಯಾರೆಲ್ಲ ಹೆಸರುಗಳಿವೆ ಎನ್ನುವುದನ್ನು ಮುಂದೆ ಓದಿ.

ಬೆಂಗಳೂರು, [ಸೆ.01]:  ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರುಗಳನ್ನು ಲೋಕಾಯುಕ್ತ ಸಂಸ್ಥೆ ಪಟ್ಟಿ ಮಾಡಿದ್ದು,  43 ಶಾಸಕರು ಹಾಗೂ 21 MLCಗಳು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿಲ್ಲ ಎಂದು ಲೋಕಾಯುಕ್ತ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 

ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತ ಸಂಸ್ಥೆ ಹಾಗೂ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗಿರುವುದು ಅವರ ಕರ್ತವ್ಯ ಮತ್ತು ಕಡ್ಡಾಯ ಕೂಡ. 

ಪ್ರತಿ ವರ್ಷ ಜೂನ್ 30ರೊಳಗೆ ಜನಪ್ರತಿನಿಧಿಗಳು ತಮ್ಮ ಹಾಗೂ ಕುಟುಂಬಸ್ಥರ ಆಸ್ತಿ ವಿವರಗಳನ್ನು ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ, ಪ್ರತಿ ವರ್ಷ ಈ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಥ ಜನಪ್ರತಿನಿಧಿಗಳಿಗೆ ಲೋಕಾಯುಕ್ತ ಸಂಸ್ಥೆ ನೋಟಿಸ್ ನೀಡಿದ್ದು,10 ದಿನಗಳೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ. 

2017-18ನೇ ಸಾಲಿನಲ್ಲಿ 11 ಮಂದಿ ತಮ್ಮ ಆಸ್ತಿ ವಿವರನ್ನು ಸಲ್ಲಿಕೆ ಮಾಡಿಲ್ಲ. ಈ ರೀತಿ ಆಸ್ತಿ ವಿವರ ನೀಡದ ಜನಪ್ರತಿನಿಧಿಗಳ ಹೆಸರುಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗಿತ್ತು. ಈಗ 2018-19ನೇ ಸಾಲಿನಲ್ಲಿ ಆಸ್ತಿ ಘೋಷಿಸದ ಜನಪ್ರತಿನಿಧಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ ಎಂದು ಲೋಕಾಯುಕ್ತ  ರಿಜಿಸ್ಟಾರ್ ನಂಜುಡಸ್ವಾಮಿ ತಿಳಿಸಿದ್ದಾರೆ.

ಆಸ್ತಿ ವಿವರ ಸಲ್ಲಿಸದ ಶಾಸಕರು 
ಶಾಸಕರಾದ  ಎಚ್ ಡಿ ರೇವಣ್ಣ, ಜಮೀರ್ ಅಹ್ಮದ್, ಸಿ ಪುಟ್ಟರಂಗ ಶೆಟ್ಟಿ, ಹರೀಶ್ ಪೂಂಜಾ, ಕೆ. ವೈ ನಂಜೇಗೌಡ, ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್, ಸಿದ್ದು ಸವದಿ, ಎಂಪಿ ರೇಣುಕಾಚಾರ್ಯ,ಸೋಮೇಗೌಡ ಬಿ ಪಾಟೀಲ ಸೇರಿ 43 ಶಾಸಕರು, ಸಿಎಂ ಇಬ್ರಾಹಿಂ, ಯು.ಬಿ ವೆಂಕಟೇಶ್, ಡಾ. ತೇಜಸ್ವಿನಿ ಗೌಡ, ಅರವಿಂದ್ ಕುಮಾರ್ ಅರಳಿ, ಟಿ.ಎ ಶರವಣ, ನಜೀರ್ ಅಹ್ಮದ್, ಕೆ.ಪಿ ನಂಜುಂಡಿ, ಡಿ. ಯು ಮಲ್ಲಿಕಾರ್ಜುನ, ಸುನೀಲ್ ಗೌಡ, ನಜೀರ್ ಅಹ್ಮದ್, ಬಸನಗೌಡ ಪಾಟೀಲ್, ಎಂ ನಾರಾಯಣ ಸ್ವಾಮಿ ಸೇರಿದಂತೆ 21 ಮಂದಿ ಎಂಎಲ್ಸಿಗಳು  ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ ಎಂದು ಲೋಕಾಯುಕ್ತ ಸಂಸ್ಥೆ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!