ರೈತರಿಗೆ ಸಾಲ ಮನ್ನಾ ಜೊತೆ ಮತ್ತೊಂದು ಗುಡ್ ನ್ಯೂಸ್

Published : Jun 23, 2018, 09:50 AM IST
ರೈತರಿಗೆ ಸಾಲ ಮನ್ನಾ ಜೊತೆ ಮತ್ತೊಂದು ಗುಡ್ ನ್ಯೂಸ್

ಸಾರಾಂಶ

ರೈತರಿಗೆ ಬೆಳೆ ನಷ್ಟ ತಪ್ಪಿಸಲು ಜಾರಿಯಾಗಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ವಿಮಾ ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲು ರಾಜ್ಯದ ಪಾಲು 655 ಕೋಟಿ ರು. ಬಿಡುಗಡೆಗೆ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು: ರೈತರಿಗೆ ಬೆಳೆ ನಷ್ಟ ತಪ್ಪಿಸಲು ಜಾರಿಯಾಗಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ವಿಮಾ ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲು ರಾಜ್ಯದ ಪಾಲು 655 ಕೋಟಿ ರು. ಬಿಡುಗಡೆಗೆ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

2015 ರಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಯಾಗಿದ್ದು, 2018 - 19 ನೇ ಸಾಲಿನ ಅನುಷ್ಠಾನ ಬಾಕಿ ಇತ್ತು. ಯೋಜನೆಗೆ ಶೇ.50 ರಷ್ಟು ಅನುದಾನ ಸರ್ಕಾರ, ಶೇ.50 ರಷ್ಟು ಅನುದಾನ ರಾಜ್ಯ ಸರ್ಕಾರ ಭರಿಸಬೇಕು. ಹೀಗಾಗಿ ಹಿಂಗಾರು ಹಾಗೂ ಮುಂಗಾರು ಬೆಳೆಗಳ ವಿಮೆಗೆ ಅನುವಾಗುವಂತೆ 655 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. 

ರೈತರಿಂದ ಶೇ.1.5ರಷ್ಟು ಪ್ರೀಮಿಯಂ: ಬೆಳೆ ವಿಮೆಗೆ ಖಾಸಗಿ ವಿಮಾ ಕಂಪನಿಗಳಿಂದ ಟೆಂಡರ್ ಕರೆಯಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸಿರುವ ಕಂಪನಿಗಳು ಶೇ.8.5 ರಿಂದ ಶೇ.14.5ರವರೆಗೆ ಪ್ರೀಮಿಯಂ ನಮೂದಿಸಿವೆ. ಕಡಿಮೆ ಪ್ರೀಮಿಯಂ ನಮೂದಿಸಿದವರಿಗೆ ಟೆಂಡರ್ ಅಂತಿಮವಾಗಲಿದೆ. 

ರೈತರು ಮುಂಗಾರು ಬೆಳೆಗೆ ಶೇ.1.5ರಷ್ಟು ಹಾಗೂ ಹಿಂಗಾರು ಬೆಳೆಗೆ ಶೇ.2 ರಷ್ಟು ಪ್ರೀಮಿಯಂ ಮೊತ್ತ ಭರಿಸಬೇಕು. ಉಳಿದ ಮೊತ್ತವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮವಾಗಿ ಭರಿಸುತ್ತದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

NIMHANS MindNote app: ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ಮೈಂಡ್‌ ನೋಟ್‌ ಆ್ಯಪ್: ಈಗ ಕನ್ನಡದಲ್ಲಿ!
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ