
ಬೆಂಗಳೂರು (ಫೆ.01): ಕೇಂದ್ರದ ಬಜೆಟ್ ಮೇಲೆ ಕನ್ನಡಿಗರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಯೋಜನೆ, ಹಳಿಗಳ ವಿಸ್ತರಣೆ ಹೀಗೆ ಹಲವು ಬೇಡಿಕೆಗಳಿದ್ದವು.
ಇಂದು ಮಂಡನೆಯಾದ ಬಜೆಟ್'ನಲ್ಲಿ ಚಿಕ್ಕಬೆಣಕಲ್'ನಿಂದ ಗಂಗಾವತಿಗೆ 13 ಕಿ.ಮೀ. ಹೊಸ ಮಾರ್ಗವನ್ನು ಮಂಜೂರು ಮಾಡಲಾಗಿದೆ.
ದಂಡೂರಿನಿಂದ ಕಲಬುರಗಿ ನಡುವಿನ 46.81 ಕಿ.ಮೀ. ಹಳಿಯನ್ನು ಡಬ್ಲಿಂಗ್ ಮಾಡಲಾಗುವುದೆಂದು ಬಜೆಟ್'ನಲ್ಲಿ ಹೇಳಲಾಗಿದೆ.
ಗುಂತಕಲ್ - ಬಳ್ಳಾರಿ - ಹೊಸಪೇಟೆ - ತೋರಣಗಲ್-ರಂಜಿತ್ ಪುರ ಹಾಗೂ ಹೊಸಪೇಟೆ - ಗದಗ ರೈಲು ಮಾರ್ಗಕ್ಕೆ ವಿದ್ಯುದೀಕರಣ ಮಾಡುವುದಾಗಿ ಬಜೆಟ್'ನಲ್ಲಿ ಪ್ರಸ್ತಾಪಿಸಲಾಗಿದೆ.
ನಮ್ಮ ಮೆಟ್ರೋ ಎರಡು ಹೊಸ ಲೈನ್ಗಳಿಗೆ ಕೂಡಾ ಇಂದಿನ ಬಜೆಟ್ ಒಪ್ಪಿಗೆ ನೀಡಿದೆ. ಎರಡನೇ ಹಂತದ ನಾಲ್ಕು ಮಾರ್ಗಗಳನ್ನು ವಿಸ್ತರಣೆ ಮಾಡಲು ಬಜೆಟ್ ಒಪ್ಪಿಗೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.