
ಬೆಂಗಳೂರು [ಜು.20]: ಶನಿವಾರ ನಿಗದಿತ ಅವಧಿಯೊಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಮುಖ್ಯ
ಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಎರಡೆರಡು ಬಾರಿ ನಿರ್ದೇಶನ ನೀಡಿದ ಹೊರತಾಗ್ಯೂ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಕಲಾಪವನ್ನು ಸೋಮ ವಾರಕ್ಕೆ ಮುಂದೂಡಿದರು.
ರಾಜ್ಯಪಾಲರ ಖಚಿತ ನಿರ್ದೇಶನವಿದ್ದರೂ ಶಾಸಕಾಂಗದ ಸಾರ್ವಭೌಮತ್ವ ಉಳಿಸಿಕೊಳ್ಳುವ ನಿಲುವಿಗೆ ಅಂಟಿಕೊಂಡ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ವಿಶ್ವಾಸ ಮತ ನಿರ್ಣಯದ ಚರ್ಚೆ ಶುಕ್ರವಾರ ಅಪೂರ್ಣ ಗೊಂಡ ಕಾರಣ ನೀಡಿ ಈ ತೀರ್ಮಾನ ಕೈಗೊಂಡರು
1 ಸೋಮವಾರ ಬಹುಮತ ಸಾಬೀತಿಗೆ ಕಡೇ ಅವಕಾಶ ನೀಡುವುದಾಗಿ ಸಿಎಂಗೆ ಮತ್ತೊಂದು ಪತ್ರ ಕಳುಹಿಸಬಹುದು
2 ಈಗಾಗಲೇ ನೀಡಿದ 2ನಿರ್ದೇಶನಗಳನ್ನು ಪಾಲಿಸದ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ರವಾನಿಸಬಹುದು
3 ತಮ್ಮ ಸೂಚನೆ ಪಾಲಿಸದಿರುವುದರಿಂದ ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಬಹುದು
4 ರಾಷ್ಟ್ರಪತಿ ಆಡಳಿತ ಹೊರತಾಗಿ ಬೇರೇನಾದರೂ ಮಾಡಬಹುದೇ ಎಂದು ಕಾನೂನು ತಜ್ಞರ ಅಭಿಮತ ಕೇಳಬಹುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.