
ಬೆಂಗಳೂರು[ಜು. 23] ತಾಜ್ ವೆಸ್ಟ್ ಎಂಡ್ ನಲ್ಲಿ ಕುಮಾರಸ್ವಾಮಿ ಸದಾ ಒಂದು ರೂಂ ಇಟ್ಟುಕೊಂಡು ಐಷಾರಾಮಿ ಬದುಕು ನಡೆಸುತ್ತಿದ್ದಾರೆ ಎಂಬೆಲ್ಲ ಆರೋಪಕ್ಕೆ ಕುಮಾರಸ್ವಾಮಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಅದು 2018ರ ವಿಧಾನಸಭೆ ಚುನಾವಣೆ ಫಲಿತಾಂಶದ ಸಮಯ. ಆ ದಿನದ ಫಲಿತಾಂಶವನ್ನು ಟಿವಿಯಲ್ಲಿ ನೋಡುತ್ತಿದ್ದೆ. ಏನು ಹೀಗಾಯಿತು? ನಮ್ಮ ರಾಜಕೀಯ ಜೀವನ ಮುಗಿಯಿತೇ? ಎಂದು ಅಂದುಕೊಳ್ಳುತ್ತಿರುವಾಗ ಕಾಂಗ್ರೆಸ್ ಕೇಂದ್ರದ ನಾಯಕ ಗುಲಾಂ ನಬಿ ಆಜಾದ್ ಕರೆ ಮಾಡಿ ನಾವು ಒಂದು ತೀರ್ಮಾನ ತೆಗೆದುಕೊಂಡಿದ್ದೇವೆ. ನೀವು ಸಿಎಂ ಪಟ್ಟ ಏರಬೇಕು ಎಂದು ಕೇಳಿಕೊಂಡರು.
‘ಯಡಿಯೂರಪ್ಪ ಸರ್ಕಾರ ರಚಿಸಿದರೂ ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಲ್ಲ’
ಇದೇ ಕಾರಣಕ್ಕೆ ಭಾವನಾತ್ಮಕ ದೃಷ್ಟಿಯಿಂದ ಆ ರೂಂ ಹಾಗೆ ಉಳಿಸಿಕೊಂಡಿದ್ದೆ. ಹೊರತು ಇದರ ಹಿಂದೆ ಬೇರೆ ಯಾವ ಉದ್ದೇಶ ಇಲ್ಲ.ದಯವಿಟ್ಟು ಟೀಕೆ ಮಾಡುವಾಗ ಮೊದಲು ವಿಚಾರ ಗಮನಿಸಿ..ಇದನ್ನು ಮಾಧ್ಯಮಗಳಿಗೆ ಮತ್ತು ವಿರೋಧ ಪಕ್ಷದವರಿಗೆ ಹೇಳುತ್ತಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.