
ಬಾಗಲಕೋಟೆ[ಸೆ.06]: ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿವಾದವಾಗುವ ವಿಚಾರಗಳನ್ನು ಕೇಳಬೇಡಿ ಎಂದು ಕೈಮುಗಿದಿದ್ದಾರೆ.
ಬೇರೆಯವರ ಸಂಕಟಕ್ಕೆ ಖುಷಿ ಪಡಲ್ಲ, ಡಿಕೆಶಿ ಬಗ್ಗೆ ಗೌರವವಿದೆ: ಡಿಸಿಎಂ
ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ನಾನು ಹೇಳುವುದೇ ಬೇರೆ. ನೀವು ಬಿಂಬಿಸುವುದೇ ಬೇರೆ. ನಾನು ಸಹಜವಾಗಿ ಉತ್ತರ ಕರ್ನಾಟಕದ ಕೆಲವು ಶಬ್ದಗಳನ್ನು ಬಳಸಿದರೆ ಮಾಧ್ಯಮದವರಾದ ನೀವು ಕನಕಪುರ ಬಂಡೆಗೆ ಡಿಚ್ಚಿ ಹೊಡೆದರು ಗೋವಿಂದ ಕಾರಜೋಳ ಅಂದರೆ ನನ್ನ ಗತಿ ಏನು? ಅಂತಹ ವಿವಾದವಾಗುವ ವಿಚಾರಗಳನ್ನು ದಯವಿಟ್ಟು ಕೇಳಬೇಡಿ ಎಂದರು.
ಟೀಕೆ ಮಾಡುವುದು ಕಾಂಗ್ರೆಸ್ ಕೆಲಸ:
ಮಧ್ಯಂತರ ಚುನಾವಣೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಸದ್ಯ ಕಾಂಗ್ರೆಸ್ನವರು ಖಾಲಿ ಇದ್ದಾರೆ. ಆ ಕಾರಣಕ್ಕಾಗಿ ಮಧ್ಯಂತರ ಚುನಾವಣೆ ಜಪ ಮಾಡುತ್ತಿದ್ದಾರೆ. ಅವರಿಗೆ ಸದ್ಯ ಉಳಿದಿರುವ ಕೆಲಸ ಟೀಕೆ- ಟಿಪ್ಪಣಿ ಮಾಡುವುದು ಹಾಗೂ ಪ್ರತಿಭಟನೆ ಮಾಡುವುದು ಎಂದು ಲೇವಡಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.