ವೈದ್ಯರೊಬ್ಬರು 40 ರೂ. ಟೋಲ್ ಹಣ ಕಡಿತಕ್ಕೆ ಸಿಬ್ಬಂದಿಗೆ ಡೆಬಿಟ್ ಕಾರ್ಡ್ ಕೊಟ್ಟರು? ಆಮೇಲೆ ಎಸ್'ಎಂಎಸ್ ಬಂದಾಗ ಮೂರ್ಚೆ ಹೋದರು !

Published : Mar 13, 2017, 09:13 PM ISTUpdated : Apr 11, 2018, 12:38 PM IST
ವೈದ್ಯರೊಬ್ಬರು 40 ರೂ. ಟೋಲ್ ಹಣ ಕಡಿತಕ್ಕೆ ಸಿಬ್ಬಂದಿಗೆ ಡೆಬಿಟ್ ಕಾರ್ಡ್ ಕೊಟ್ಟರು? ಆಮೇಲೆ ಎಸ್'ಎಂಎಸ್ ಬಂದಾಗ ಮೂರ್ಚೆ ಹೋದರು !

ಸಾರಾಂಶ

ವೈದ್ಯರು ರಸೀದಿಯೊಂದಿಗೆ ಕಾರ್ಡ್ ಹಿಂಪಡೆದು ಮುಂದಕ್ಕೆ ತೆರಳಿದ್ದಾರೆ. ಕೆಲ ನಿಮಿಷಗಳ ನಂತರ ಅವರ ಮೊಬೈಲ್'ಗೆ ಹಣ ಕಡಿತಗೊಂಡ ಸಂದೇಶ ಬಂದಿತ್ತು. ಎಸ್'ಎಂಎಸ್ ನೋಡಿದ ಅವರಿಗೆ ಶಾಕ್ ಕಾದಿತ್ತು. ಟೋಲ್'ನಲ್ಲಿ 40 ರೂ. ಬದಲಿಗೆ 4 ಲಕ್ಷ ರೂ. ಕಡಿತಗೊಂಡಿತ್ತು. ತಕ್ಷಣವೇ ಟೋಲ್'ಗೆ ಹಿಂತಿರುಗಿದ ವೈದ್ಯರು ಟೋಲ್ ಪಾವತಿಸಿದ ಪ್ಲಾಜಾ ಕಡೆಗೆ ವಾಪಸ್ ತೆರಳಿ ಇಷ್ಟು ಹಣ ಕಡಿತವಾಗಿರುವುದಕ್ಕೆ ಪ್ರಶ್ನಿಸಿದ್ದಾರೆ.

ಉಡುಪಿ(ಮಾ.14): ವೈದ್ಯರೊಬ್ಬರು 40 ರೂ ಟೋಲ್ ಹಣಕ್ಕೆ ಭಾರಿ ಹಣ ತೆತ್ತ ಘಟನೆ ಉಡುಪಿ ಹತ್ತಿರದ ಕೊಚ್ಚಿ-ಮುಂಬೈ ರಾಷ್ಟ್ರೀಯ ಹೆದ್ದಾರಿ ಗೇಟ್'ನ ಸಾಸ್ತಾನದ ಗುಂಡ್ಮಿ ಟೋಲ್'ಗೇಟ್'ನಲ್ಲಿ ನಡೆದಿದೆ

ಮೈಸೂರು ಮೂಲದ ಡಾ.ರಾವ್ ಎಂಬ ವೈದ್ಯ ಉಡುಪಿ ಕಡೆಗೆ ತಮ್ಮ ಕಾರಿನಲ್ಲಿ ಪ್ರವಾಸ ತೆರಳಿದ್ದಾರೆ. ಹೆದ್ದಾರಿಯಲ್ಲಿ ಸಿಕ್ಕ ಟೋಲ್'ನಲ್ಲಿ ಹಣ ಪಾವತಿಸಲು ಟೋಲ್ ಸಿಬ್ಬಂದಿಗೆ ಡೆಬಿಟ್ ಕಾರ್ಡ್ ಕೊಟ್ಟಿದ್ದಾರೆ. ಸಿಬ್ಬಂದಿ ರಾವ್ ಬಳಿ ನಿಗದಿತ ಶುಲ್ಕ 40 ರೂ.ಗಳನ್ನು ಪಾವತಿಸಿಕೊಂಡಿರುವುದಾಗಿ ತಿಳಿಸಿ ಕಾರ್ಡನ್ನು ರಾವ್ ಅವರಿಗೆ ವಾಪಸ್ ನೀಡಿದ್ದಾರೆ.

ವೈದ್ಯರು ರಸೀದಿಯೊಂದಿಗೆ ಕಾರ್ಡ್ ಹಿಂಪಡೆದು ಮುಂದಕ್ಕೆ ತೆರಳಿದ್ದಾರೆ. ಕೆಲ ನಿಮಿಷಗಳ ನಂತರ ಅವರ ಮೊಬೈಲ್'ಗೆ ಹಣ ಕಡಿತಗೊಂಡ ಸಂದೇಶ ಬಂದಿತ್ತು. ಎಸ್'ಎಂಎಸ್ ನೋಡಿದ ಅವರಿಗೆ ಶಾಕ್ ಕಾದಿತ್ತು. ಟೋಲ್'ನಲ್ಲಿ 40 ರೂ. ಬದಲಿಗೆ 4 ಲಕ್ಷ ರೂ. ಕಡಿತಗೊಂಡಿತ್ತು. ತಕ್ಷಣವೇ ಟೋಲ್'ಗೆ ಹಿಂತಿರುಗಿದ ವೈದ್ಯರು ಟೋಲ್ ಪಾವತಿಸಿದ ಪ್ಲಾಜಾ ಕಡೆಗೆ ವಾಪಸ್ ತೆರಳಿ ಇಷ್ಟು ಹಣ ಕಡಿತವಾಗಿರುವುದಕ್ಕೆ ಪ್ರಶ್ನಿಸಿದ್ದಾರೆ.

ಆದರೆ ಇದು ತಾಂತ್ರಿಕ ದೋಷಯಿಂದ ಈ ರೀತಿ ಸಮಸ್ಯೆಯುಂಟಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ ಬೃಹತ್ ಮೊತ್ತವಾದ ಕಾರಣ ಟೋಲ್ ಸಹಾಯಕರು ಹಣ ತಕ್ಷಣವೇ ವಾಪಸ್ ನೀಡಲಿಲ್ಲ. ಅಷ್ಟಕ್ಕೆ ಸುಮ್ಮನಾಗದ ವೈದ್ಯರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಟೋಲ್ ಕಂಪನಿಯವರಿಂದ ಹಣ ವಾಪಸ್ ಕೊಡಿಸುವಂತೆ ದೂರು ನೀಡಿದ್ದಾರೆ.

ದೂರು ನೀಡಿದ ನಂತರ ಟೋಲ್ ಕಂಪನಿ ಉಳಿದ ಹಣಕ್ಕೆ ಚೆಕ್ ನೀಡಲು ಮುಂದಾಗಿದ್ದಾರೆ. ಆದರೆ ವೈದ್ಯರು ತಮಗೆ ನಗದೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಟೋಲ್ ಸಿಬ್ಬಂದಿ ನಗದನ್ನು ನೀಡುವುದಾಗಿ ಭರವಸೆ ನೀಡಿದ ನಂತರ ಸಮಸ್ಯೆ ಇತ್ಯರ್ಥವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು