
ಬೆಂಗಳೂರು(ಸೆ.13) ಸಿದ್ದರಾಮಯ್ಯ ವಾಪಸ್ ಆದ ಬಳಿಕ ಸಂಪುಟ ವಿಸ್ತರಣೆ ಆಗುವುದು ಬಹುತೇಕ ಪಕ್ಕಾ ಆಗಿದೆ. ಖಾಲಿ ಇರುವ 6 ರಲ್ಲಿ ನಾಲ್ಕು ಸ್ಥಾನ ತುಂಬಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.
ಈಗಿರುವ ರಾಜಕಾರಣದ ಕ್ಷಿಪ್ರ ಬೆಳವಣಿಗೆ ಗಮನಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಇಂಥ ಆಲೋಚನೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಮುಂದೂಡಿದರೇ ಅತೃಪ್ತ ಶಾಸಕರೆಲ್ಲಾ ಒಂದಾಗುವ ಭೀತಿ ಸಹ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದೆ.
ಇನ್ನೊಂದು ಕಡೆ ಸಚಿವ ಆಕಾಂಕ್ಷಿಗಳನ್ನ ಭೇಟಿ ಮಾಡ್ತಿರುವ ರಮೇಶ್ ಜಾರಕಿಹೊಳಿ ತಮ್ಮ ತಂತ್ರಕ್ಕೆ ಬಲ ತುಂಬಿಕೊಳ್ಳುತ್ತಿದ್ದಾರೆ. ಬಳ್ಳಾರಿಯ ಐವರು ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗುವ ಮಾಹಿತಿ ಕೆಪಿಸಿಸಿ ಅಧ್ಯಕ್ಷರಿಗೂ ಲಭ್ಯವಾಗಿದೆ.
ನಿನ್ನೆ ಬಳ್ಳಾರಿ ಶಾಸಕರೊಂದಿಗೆ ದಿನೇಶ್ ಗುಂಡೂರಾವ್ ಒಂದು ಹಂತದ ಮಾರುಕತೆಯನ್ನು ಆಡಿದ್ದಾರೆ. ಬಳ್ಳಾರಿಯ ಶಾಸಕರಿಗೆ ಯಾರಿಗಾದ್ರು ಒಬ್ಬರಬ್ನ ಸಚಿವರನ್ನಾಗಿ ಮಾಡಿ ಬಳ್ಳಾರಿ ಉಸ್ತುವಾರಿಯನ್ನ ಅವರಿಗೆ ನೀಡುವಂತೆ ಬಳ್ಳಾರಿ ಶಾಸಕರು ಮನವಿ ಮಾಡಿದ್ದಾರೆ.
ಇನ್ನೊಂದು ಕಡೆ ನಾವು ಹೇಳಿದ ವಾಲ್ಮೀಕಿ ಸಮುದಾಯದ ಬಳ್ಳಾರಿ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಲು ರಮೇಶ್ ಜಾರಕಿಹೊಳಿ ಕೂಡಾ ಪಟ್ಟು ಹಿಡಿದು ನಿಂತಿದ್ದಾರೆ. ಹಾಗಾಗಿ ಶೀಘ್ರದಲ್ಲಿ ಸಂಪುಟ ವಿಸ್ತರಣೆ ಮಾಡುವಂತೆ ಕೆ.ಸಿ ವೇಣುಗೋಪಾಲ್ ಜೊತೆ ಚರ್ಚಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ವಾಪಸ್ ಆಗುವುದನ್ನೇ ಕಾಯುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.