
ಶಿವಮೊಗ್ಗ(ನ.06) ಬಿಎಸ್ ಯಡಿಯೂರಪ್ಪ ಮತ್ತಿ ದೋಸ್ತಿ ಸರಕಾರದ ಪ್ರತಿಷ್ಠೆ ಕಣದಲ್ಲಿ ಅಂತಿಮವಾಗಿ ಜಯ ಬಿಎಸ್ ವೈ ಪಾಲಾಗಿದೆ. ಆದರೆ ಬಿಜೆಪಿ ಇಷ್ಟಕ್ಕೆ ನಿಟ್ಟುಸಿರು ಬಿಡುವಂತೆ ಇಲ್ಲ.
ರಾಘವೇಂದ್ರ 5,43,306, ದೋಸ್ತಿ ಸರಕಾರದ ಮಧು ಬಂಗಾರಪ್ಪ 4,91,158 ಮತ್ತು ಜೆಡಿಯುನ ಮಹಿಮಾ ಪಟೇಲ್ 8713 ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಮೇಲಿನ ಆಯ್ಕೆಯಲ್ಲಿ ಯಾರೂ ಸರಿ ಇಲ್ಲ ಎಂಬ ನೋಟಾ ಮತಗಳ ಸಂಖ್ಯೆ ನಿಬ್ಬೆರಗಾಗಿಸುತ್ತಿದೆ. 10687 ನೋಟಾ ಮತಗಳು ಶಿವಮೊಗ್ಗದಲ್ಲಿ ಚಲಾವಣೆಯಾಗಿದೆ. ಅಂದರೆ ಪ್ರಮುಖ ರಾಜಕೀಯ ಪಕ್ಷ ಜೆಡಿಯುಗಿಂತ ನೋಟಾ ಮತಗಳೆ ಹೆಚ್ಚಿದೆ.
ಶಿವಮೊಗ್ಗದಲ್ಲಿ ಅರಳಿತು ಕಮಲ; ಬಾಡಿತು ತೆನೆ
ನೋಟಾ ಮತಗಳಿಗೆ ಸಂವಿಧಾನ ಇನ್ನು ಮುಂದೆ ಯಾವ ಬಗೆಯ ಮಾನ್ಯತೆ ನೀಡುತ್ತದೆ ಎಂಬ ಪ್ರಶ್ನೆ ಸಹ ಎದುರಾಗಿದೆ. ಜನರಿಗೆ ಸದ್ಯದ ರಾಜಕಾರಣದ ಬಗ್ಗೆ ಅಸಹನೆ ವ್ಯಕ್ತವಾಗುತ್ತಿರುವುದನ್ನು ಈ ನೋಟಾ ಮತಗಳ ಲೆಕ್ಕದಿಂದ ಅರಿತುಕೊಳ್ಳಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.