ಕರ್ನಾಟಕ ಬಂದ್: ಇಂದು ಏನೇನಿದೆ? ಯಾವ ಸೇವೆ ಇಲ್ಲ? ಇಲ್ಲಿದೆ ವಿವರ

Published : Jun 12, 2017, 08:14 AM ISTUpdated : Apr 11, 2018, 12:54 PM IST
ಕರ್ನಾಟಕ ಬಂದ್: ಇಂದು ಏನೇನಿದೆ? ಯಾವ ಸೇವೆ ಇಲ್ಲ? ಇಲ್ಲಿದೆ ವಿವರ

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದ್ರೆ ಬಂದ್‌ಗೆ ಕೆಲ ಸಂಘಟನೆಗಳು ಬೆಂಬಲ ನೀಡಿದ್ರೆ, ಕೆಲವೊಂದು ಸಂಘಟನೆಗಳು ಬೆಂಬಲ ನಿರಾಕರಿಸಿವೆ. ಹೀಗಾಗಿ ಇಂದು ಬಂದ್ ನಡೆಯುತ್ತದಾ ಇಲ್ಲವಾ ಎನ್ನುವುದೇ ಅನುಮಾನ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕಾಗುತ್ತದೆ. ಹೀಗಾಗಿ ಇಂದು ಏನೇನು ಇರುತ್ತದೆ ಎನೇನು ಇರುವುದಿಲ್ಲ ಇಲ್ಲಿದೆ ವಿವರ.

ಬೆಂಗಳೂರು(ಜೂ.12): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದ್ರೆ ಬಂದ್‌ಗೆ ಕೆಲ ಸಂಘಟನೆಗಳು ಬೆಂಬಲ ನೀಡಿದ್ರೆ, ಕೆಲವೊಂದು ಸಂಘಟನೆಗಳು ಬೆಂಬಲ ನಿರಾಕರಿಸಿವೆ. ಹೀಗಾಗಿ ಇಂದು ಬಂದ್ ನಡೆಯುತ್ತದಾ ಇಲ್ಲವಾ ಎನ್ನುವುದೇ ಅನುಮಾನ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕಾಗುತ್ತದೆ. ಹೀಗಾಗಿ ಇಂದು ಏನೇನು ಇರುತ್ತದೆ ಎನೇನು ಇರುವುದಿಲ್ಲ ಇಲ್ಲಿದೆ ವಿವರ.

ಶಾಶ್ವತ ನೀರಾವರಿ ಯೋಜನೆ , ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಾಟಳ್ ನಾಗರಾಜ್ ಇಂದು ಕರ್ನಾಟಕ ಬಂದ್‌'ಗೆ ಕರೆ ನೀಡಿದ್ದಾರೆ. ಆದರೆ  ರಾಜ್ಯ ಮಾಲೀಕರ ಸಂಘ ಸೇರಿದಂತೆ ಕೆಲ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ರೆ, ಕೆಎಸ್​ಆರ್​ಟಿಸಿ, ಬಿಎಂಟಿಸಿ, ಆಟೋ ಚಾಲಕರ ಸಂಘ ಬೆಂಬಲಿಸಲು ನಿರಾಕರಿಸಿವೆ.  ಇದ್ರಿಂದ ಸಿಡಿದೆದ್ದಿರುವ ವಾಟಾಳ್ ನಾಗರಾಜ್, ಇಂದು ಬಸ್‌'ಗಳು ರೋಡಿಗಿಳಿದರೆ ಕಲ್ಲು ತೂರಲಾಗುವುದು ಅಂತಾ ಎಚ್ಚರಿಕೆ ನೀಡಿದ್ದಾರೆ.

ಇಂದು ಏನೆಲ್ಲಾ ಇರುತ್ತೆ?

-ಮೆಡಿಕಲ್ ಶಾಪ್, ಆಸ್ಪತ್ರೆಗಳು

-ಹಾಲು, ನ್ಯೂಸ್ ಪೇಪರ್

-ಹೋಟೆಲ್​ಗಳು ಓಪನ್

-ಮಾಲ್‌ಗಳು

-ಚಿತ್ರಮಂದಿರಗಳು

-ದಿನಸಿ ಅಂಗಡಿಗಳು

-ತರಕಾರಿ ಮಾರುಕಟ್ಟೆ

-ಬಿಎಂಟಿಸಿ , ಕೆಎಸ್‌ಆರ್‌ಟಿಸಿ ಸಂಚಾರ

-ಮೆಟ್ರೋ, ಆಟೋ ಸಂಚಾರ

-ಟ್ಯಾಕ್ಸಿ ಸೇವೆ

ಬಂದ್ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ  ಬೆಂಗಳೂರು ವಿವಿಯ ಸ್ನಾತಕೊತ್ತರ ಪದವಿಯ  ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಇನ್ನೊಂದೆಡೆ ಶಾಶ್ವತ ನೀರಾವರಿ ಹೋರಾಟ ತೀವ್ರಗೊಂಡಿರುವ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಮಿಕ್ಕ ಜಿಲ್ಲೆಗಳಲ್ಲಿ ಪರಿಸ್ಥಿತಿ ಆಧರಿಸಿ ಶಾಲೆಗೆ ರಜೆ ಕೊಡಬೇಕೋ ಬೇಡವೋ ಅನ್ನೋದನ್ನು ಆಯಾ ಜಿಲ್ಲಾಧಿಕಾರಿಗಳು ನಿರ್ಧರಿಸಲಿದ್ದಾರೆ.

ಇನ್ನೂ ಕೆಲ ಜಿಲ್ಲೆಗಳಲ್ಲಿ ಇಂದು ಯಥಾಸ್ಥಿತಿ ಇರಲಿದೆ. ಯಾವುದೇ ಸಂಘಟನೆಗಳು ಬೆಂಬಲ ನೀಡದ ಹಿನ್ನೆಲೆಯಲ್ಲಿ ಕೊಪ್ಪಳ , ಚಿತ್ರದುರ್ಗ, ಮಡಿಕೇರಿಯಲ್ಲಿ  ಶಾಲಾ-ಕಾಲೇಜುಗಳು, ಬಸ್ ಸಂಚಾರ ಎಂದಿನಂತೆ ಇರಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ 30 ಕ್ಕೂ ಹೆಚ್ಚು ಕೆಎಸ್​ಆರ್​ಪಿ ತುಕಡಿ ಮತ್ತು 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಒಟ್ನಲ್ಲಿ ಇಂದು ನಡೆಯುವ ಬಂದ್ ಬಗ್ಗೆ ನಾನಾ ಗೊಂದಲಗಳಿದ್ದು, ಏನಾಗುತ್ತೆ ಅನ್ನೋದೇ ಕುತೂಹಲ..

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ