
ಬೆಂಗಳೂರು(ಅ. 10) ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬರ ಪರಿಹಾರದ ಬಗ್ಗೆ ಮಾತನಾಡುತ್ತ ತಮ್ಮ ಪಕ್ಷದ ನಾಯಕರ ವಿರುದ್ಧವೇ ಹರಿಹಾಯ್ದಿದ್ದರು. ಇದಕ್ಕೆ ಪರಿಣಾಮ ಎಂಬಂತೆ ಶೋಕಾಸ್ ನೋಟಿಸ್ ಸಹ ಪಡೆದುಕೊಂಡಿದ್ದರು.
ಇದೇ ವಿಚಾರ ಗುರುವಾರ ಆರಂಭವಾದ ವಿಧಾನಸಭೆ ಕಲಾಪದಲ್ಲಿಯೂ ಪ್ರತಿಧ್ವನಿಸಿತು. 'ಯತ್ನಾಳ್ ಸತ್ಯ ಹೇಳ್ತಾರೆ. ಅವರು ನನಗೆ ಒಳ್ಳೆ ಸ್ನೇಹಿತ. ಯಡಿಯೂರಪ್ಪ ಅವರನ್ನ ತೆಗೆಯೋದಕ್ಕೆ ಇಬ್ಬರು ಕೇಂದ್ರ ಸಚಿವರು ಹೊರಟಿದ್ದಾರೆ ಅಂತಾ ಹೇಳಿದ್ದಾರೆ ಯತ್ನಾಳ್. ಪಾಪ ಯತ್ನಾಳ್ ಸತ್ಯ ಹೇಳಿದ್ದಾರೆ, ಅವರ ಸತ್ಯ ಬೇರೆಯವರಿಗೆ ಕಹಿ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಯತ್ನಾಳ್ ಮಾತುಗಳನ್ನೆ ಇಟ್ಟುಕೊಂಡು ಕಾಲೆಳೆದರು.
ಚಾಡಿಕೋರ ಕೇಂದ್ರ ಸಚಿವರಿಂದ ಬಿಎಸ್ ವೈ ಮುಗಿಸಲು ಯತ್ನ!
ಡೋಂಟ್ ವರಿ ಮಿಸ್ಟರ್ ಯತ್ನಾಳ್. ಯಡಿಯೂರಪ್ಪ ಅವರಿಗೆ ಯಾರು ಡಿಸಿಎಂ ಅನ್ನೋದೇ ಗೊತ್ತಿಲ್ಲ ಪಾಪ.. ಒಬ್ಬರು ಸೋತವರು ಡಿಸಿಎಂ, ಒಬ್ಬರು ಮೊದಲ ಬಾರಿಗೆ ಸಚಿವರಾದವರು ಡಿಸಿಎಂ, ಕಾರಜೋಳ ಡಿಸಿಎಂ ನಾನು ಒಪ್ತೀನಿ.. ಯಡಿಯೂರಪ್ಪ ಹೇಳಿದವರು ಒಂದಿಬ್ಬರು ಸಚಿವರಾಗಿದ್ದಾರೆ ಅಷ್ಟೇ.. ಉಳಿದವರು ಹೈಕಮಾಂಡ್ ಹೇಳಿದವರು ಸಚಿವರು ಎನ್ನುತ್ತ ಯಡಿಯೂರಪ್ಪ ವೀಕ್ ಸಿಎಂ ಎಂಬ ತಮ್ಮ ಮೊದಲಿನ ಹೇಳಿಕೆಯನ್ನು ಬೇರೆಯ ತೆರನಾಗಿ ವಿಧಾನಸೌಧದಲ್ಲಿಯೂ ಹೊರಗಿಟ್ಟರು.
ಚಳಿಗಾಲದ ಅಧಿವೇಶನ ಆರಂಭಕ್ಕೆ ಕೊನೆ ದಿನ ಕಾಂಗ್ರೆಸ್ ವಿಪಕ್ಷ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿತ್ತು. ವಿಪಕ್ಷ ನಾಯಕರ ರೇಸ್ ನಲ್ಲಿ ಇದ್ದ ಪರಮೇಶ್ವರ ಮತ್ತು ಎಚ್ಕೆ ಪಾಟೀಲರನ್ನು ಹಿಂದಿಕ್ಕಿ ಸಿದ್ದರಾಮಯ್ಯ ಆಯ್ಕೆಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.