ರೆಸ್ಟೋರೆಂಟ್'ನಲ್ಲಿ ಕನ್ನಡ ಬಳಕೆ ಇಲ್ಲದ್ದನ್ನು ನೋಡಿ ಕರವೇ ಕಾರ್ಯಕರ್ತರ ಆಕ್ರೋಶ

Published : Jul 06, 2017, 03:40 PM ISTUpdated : Apr 11, 2018, 12:50 PM IST
ರೆಸ್ಟೋರೆಂಟ್'ನಲ್ಲಿ ಕನ್ನಡ ಬಳಕೆ ಇಲ್ಲದ್ದನ್ನು ನೋಡಿ ಕರವೇ ಕಾರ್ಯಕರ್ತರ ಆಕ್ರೋಶ

ಸಾರಾಂಶ

ಹಿಂದಿ ಹೇರಿಕೆ ವಿರುದ್ಧ ಆಂದೋಲನದ ಬಳಿಕ ಕನ್ನಡಪರ ಕಾರ್ಯಕರ್ತರ ಕೆಂಗಣ್ಣಿಗೆ ಇಂಗ್ಲೀಷ್ ಕೂಡಾ ಗುರಿಯಾಗಿದೆ.

ನವದೆಹಲಿ (ಜು.15): ಹಿಂದಿ ಹೇರಿಕೆ ವಿರುದ್ಧ ಆಂದೋಲನದ ಬಳಿಕ ಕನ್ನಡಪರ ಕಾರ್ಯಕರ್ತರ ಕೆಂಗಣ್ಣಿಗೆ ಇಂಗ್ಲೀಷ್ ಕೂಡಾ ಗುರಿಯಾಗಿದೆ.

ಹಿಂದಿ ವಿರೋಧಿ ಆಂದೋಲನ ನಡೆಯುತ್ತಿರುವಾಗ ಅದರ ಮಧ್ಯದಲ್ಲಿಯೇ ಇಲ್ಲಿನ ಇಸಿಒ ಟೆಕ್ ಪಾರ್ಕ್’ವೊಂದರ ಸಮೀಪದಲ್ಲಿರುವ  ಮಾಲ್’ನ ರೆಸ್ಟೋರೆಂಟ್’ವೊಂದರಲ್ಲಿ ಇಂಗ್ಲೀಷ್ ಮತ್ತು ಹಿಂದಿ ಮಾತ್ರ ಬೋರ್ಡ್ ಇದೆ. ಕನ್ನಡದಲ್ಲಿ ಇಲ್ಲದೇ ಇರುವುದನ್ನು ಕಂಡು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಶೆಟ್ಟಿ ನೇತೃತ್ವದ ಬಣ ರೆಸ್ಟೋರೆಂಟ್ ಮೇಲೆ ಕ್ರಮ ಕೈಗೊಂಡಿದೆ.

ನಮ್ಮದೇ ನೆಲವನ್ನು ಬಳಸಿಕೊಂಡು ಬ್ಯಸಿನೆಸ್, ಕೈಗಾರಿಕೆಗಳನ್ನು ನಡೆಸುತ್ತಾರೆ. ನಮ್ಮದೇ ವಿದ್ಯುತ್ತನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ಆದರೆ ಅವರು ಕನ್ನಡವನ್ನು ಮಾತ್ರ ಬಳಸುವುದಿಲ್ಲ. ಕನ್ನಡಿಗರಿಗೆ ಮಾತ್ರ ಕೆಲಸ ಕೊಡುವುದಿಲ್ಲ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಂಡೆವು ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಇಂಗ್ಲೀಷ್ ಮತ್ತು ಹಿಂದಿಯನ್ನು ಕರ್ನಾಟಕದಲ್ಲಿ ಬಳಸುವುದಾದರೆ ಕನ್ನಡವನ್ನು ದೆಹಲಿ ಮತ್ತಿತರ ಕಡೆಯೂ ಬಳಸಿ. ಆಗ ನಾವು ನಿಮ್ಮ ಭಾಷೆಯನ್ನು ಇಲ್ಲಿ ಬಳಸುತ್ತೇವೆ ಎಂದು ಒತ್ತಾಯಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ