
ಬೆಂಗಳೂರು: ಕಾರ್ಗಿಲ್ ವಿಜಯ ದಿವಸ ಆಚರಣೆಯ ಬಗ್ಗೆ ಕೂತುಹಲಕಾರಿ ವಿಷಯ ಇದು. ಕಾಂಗ್ರೆಸ್ ನೇತೃತ್ವದ ಯುಪಿಏ ಸರ್ಕಾರವು 2004 ರಿಂದ 2009ರವರೆಗೆ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲೇ ಇಲ್ಲ. ಕಾಂಗ್ರೆಸ್ ಪ್ರಕಾರ ಈ ಯುದ್ಧವನನ್ನು ಬಿಜೆಪಿಯ ಯುದ್ಧವೆಂದೇ ಪರಿಗಣಿಸಿತ್ತು. ರಾಜ್ಯಸಭೆ ಸಂಸದ ರಾಜೀವ ಚಂದ್ರಶೇಖರ್ ಈ ವಿಷಯವನ್ನು ನಿರಂತರವಾಗಿ ಸರ್ಕಾರದ ಗಮನಕ್ಕೆ ತಂದು, ಪ್ರತಿ ವರ್ಷ ವಿಜಯೋತ್ಸವ ಆಚರಿಸುವಂತೆ ಆಗ್ರಹಿಸುತ್ತಲೇ ಇದ್ದರು. ಕೊನೆಗೂ ಅವರ ಮನವಿಗೆ ಮಣಿದ ಸರ್ಕಾರ 2009ರಿಂದ ಪ್ರತಿವರ್ಷ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತಿದೆ.
ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಬೇಕೆಂದು ಸಂಸದ ರಾಜೀವ್ ಆಗ್ರಹಿಸುತ್ತಲೇ ಇದ್ದಾರೆ. ಈ ಬಗ್ಗೆ ಕಾರ್ಗಿಲ್ ವಿಜಯೋತ್ಸವದ 2 ದಿವಸದ 2 ದಿನಗಳ ಬಳಿಕ ( ಜುಲೈ 28ರಂದು) ರಾಜೀವ್ ಈ ಬಗ್ಗೆ ಸಂಸತ್ತಿನಲ್ಲಿ ಠರಾವು ಮಂಡಿಸಿ, ಎಲ್ಲಾ ಪಕ್ಷಗಳ ಸಂಸದರಿಂದ ಬೆಂಬಲ ಯಾಚಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.