ಬೆಂಗಳೂರಲ್ಲಿ ಇಂದಿರಾ ಕ್ಯಾಂಟಿನ್'ಗೋಸ್ಕರ ಬ್ರಿಟಿಷರ ಕಾಲದ ಲೈಬ್ರರಿ ನೆಲಸಮ

Published : Jul 26, 2017, 11:50 AM ISTUpdated : Apr 11, 2018, 12:35 PM IST
ಬೆಂಗಳೂರಲ್ಲಿ ಇಂದಿರಾ ಕ್ಯಾಂಟಿನ್'ಗೋಸ್ಕರ ಬ್ರಿಟಿಷರ ಕಾಲದ ಲೈಬ್ರರಿ ನೆಲಸಮ

ಸಾರಾಂಶ

ರಾಜಧಾನಿ ಜನರ ಹಸಿವು  ನಿಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸರ್ಕಾರ ಮುಂದಾಗುತ್ತಿದೆ. ಅದರೆ ಪಾಲಿಕೆ ಕ್ಯಾಂಟೀನ್ ಅರಂಭದಲ್ಲೇ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ಇದೀಗ ಬ್ರಿಟಿಷರ ಕಾಲದಲ್ಲಿ ಕಟ್ಟಲಾದ ಲೈಬ್ರರಿಯನ್ನು ಕೆಡವಿ ಮತ್ತೊಂದು ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡಿದೆ.

ಬೆಂಗಳೂರು(ಜುಲೈ 26): ಇಂದಿರಾ ಕ್ಯಾಂಟೀನ್ ಸ್ಥಾಪನೆಗಾಗಿ ಬ್ರಿಟಿಷರ ಕಾಲದ ಕಟ್ಟಡವೊಂದನ್ನು ಧರೆಗುರುಳಿಸಲಾಗಿದೆ. ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಹೊಯ್ಸಳನಗರ ವಾರ್ಡ್'ನಲ್ಲಿ ಶತಮಾನದ ಹಿಂದಿನ ಪಾರಂಪರಿಕ ಗ್ರಂಥಾಲಯವನ್ನು ಕೆಡವಲಾಗಿದೆ. ಈ ಕಟ್ಟಡವು ಶಿಥಿಲಗೊಂಡಿದೆ ಎಂಬ ಕಾರಣವೊಡ್ಡಿ ಬಿಬಿಎಂಪಿಯು ಧ್ವಂಸ ಮಾಡಿ ಆ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿದೆ.

1900 ಇಸವಿಯಲ್ಲಿ ನಿರ್ಮಾಣ ವಾಗಿದ್ದ ಈ ಕಟ್ಟಡವನ್ನು ರಾಜ್ಯ ಪುರಾತತ್ವ ಇಲಾಖೆ ನಗರದ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿಸಿತ್ತು. ಮರ್ಫಿ ಟೌನ್ ಮಾರುಕಟ್ಟೆ ಹಾಗೂ ಈ ಗ್ರಂಥಾಲಯ ಎರಡೂ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿವೆ. ಆದ್ರೀಗ ಗ್ರಂಥಾಲಯ ಕೆಡವಿಹಾಕಲಾಗಿದ್ದು, ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ..

ಸಿಎ ನಿವೇಶನ, ಪಾರ್ಕ್, ಮರಗಳ ಕಟಾವು ಹೀಗೆ ಕ್ಯಾಂಟೀನ್ ನಿರ್ಮಾಣ ವಿಚಾರದಲ್ಲಿ ಪಾಲಿಕೆ ಆಡಳಿತ ಪಕ್ಷ ಒಂದಾದ ಮೇಲೊಂದು ವಿರೋಧ ಕಟ್ಟಿಕೊಳ್ಳುತ್ತಲೇ ಬಂದಿದೆ. ಇದೀಗ ಪಾರಂಪಡಿಕ ಕಟ್ಟಡವನ್ನೂ ನೆಲಸಮ ಮಾಡಿ ಮತ್ತಷ್ಟು ವಿರೋಧಕ್ಕೆ ಕಾರಣವಾಗಿದ್ದಂತೂ ಸುಳ್ಳಲ್ಲ.

- ಗಣೇಶ ಹೆಗಡೆ, ಸುವರ್ಣ ನ್ಯೂಸ್, ಬೆಂಗಳೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧರ್ಮಸ್ಥಳ ಪ್ರಕರಣ: ಶಿವಮೊಗ್ಗ ಜೈಲಿನಿಂದ ಇಂದು 'ಬುರುಡೆ ಚಿನ್ನಯ್ಯ' ಬಿಡುಗಡೆ, ಶ್ಯೂರಿಟಿ ಕೊಟ್ಟಿದ್ದು ಯಾರು?
India Latest News Live: ಬಿಹಾರ ಸೋಲಿನ ಬಳಿಕ ಪ್ರಶಾಂತ್ ಕಿಶೋರ್ - ಪ್ರಿಯಾಂಕಾ ಗಾಂಧಿ ರಹಸ್ಯ ಭೇಟಿ?