
ಬೆಂಗಳೂರು(ಜುಲೈ 26): ಇಂದಿರಾ ಕ್ಯಾಂಟೀನ್ ಸ್ಥಾಪನೆಗಾಗಿ ಬ್ರಿಟಿಷರ ಕಾಲದ ಕಟ್ಟಡವೊಂದನ್ನು ಧರೆಗುರುಳಿಸಲಾಗಿದೆ. ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಹೊಯ್ಸಳನಗರ ವಾರ್ಡ್'ನಲ್ಲಿ ಶತಮಾನದ ಹಿಂದಿನ ಪಾರಂಪರಿಕ ಗ್ರಂಥಾಲಯವನ್ನು ಕೆಡವಲಾಗಿದೆ. ಈ ಕಟ್ಟಡವು ಶಿಥಿಲಗೊಂಡಿದೆ ಎಂಬ ಕಾರಣವೊಡ್ಡಿ ಬಿಬಿಎಂಪಿಯು ಧ್ವಂಸ ಮಾಡಿ ಆ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿದೆ.
1900 ಇಸವಿಯಲ್ಲಿ ನಿರ್ಮಾಣ ವಾಗಿದ್ದ ಈ ಕಟ್ಟಡವನ್ನು ರಾಜ್ಯ ಪುರಾತತ್ವ ಇಲಾಖೆ ನಗರದ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿಸಿತ್ತು. ಮರ್ಫಿ ಟೌನ್ ಮಾರುಕಟ್ಟೆ ಹಾಗೂ ಈ ಗ್ರಂಥಾಲಯ ಎರಡೂ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿವೆ. ಆದ್ರೀಗ ಗ್ರಂಥಾಲಯ ಕೆಡವಿಹಾಕಲಾಗಿದ್ದು, ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ..
ಸಿಎ ನಿವೇಶನ, ಪಾರ್ಕ್, ಮರಗಳ ಕಟಾವು ಹೀಗೆ ಕ್ಯಾಂಟೀನ್ ನಿರ್ಮಾಣ ವಿಚಾರದಲ್ಲಿ ಪಾಲಿಕೆ ಆಡಳಿತ ಪಕ್ಷ ಒಂದಾದ ಮೇಲೊಂದು ವಿರೋಧ ಕಟ್ಟಿಕೊಳ್ಳುತ್ತಲೇ ಬಂದಿದೆ. ಇದೀಗ ಪಾರಂಪಡಿಕ ಕಟ್ಟಡವನ್ನೂ ನೆಲಸಮ ಮಾಡಿ ಮತ್ತಷ್ಟು ವಿರೋಧಕ್ಕೆ ಕಾರಣವಾಗಿದ್ದಂತೂ ಸುಳ್ಳಲ್ಲ.
- ಗಣೇಶ ಹೆಗಡೆ, ಸುವರ್ಣ ನ್ಯೂಸ್, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.