ವಿಧವೆಯ ವಂಚಿಸಿದ ಕರವೇ ಕಾರ್ಯಕರ್ತ ರಾಜೇಶ್

Published : Jun 11, 2017, 09:40 AM ISTUpdated : Apr 11, 2018, 01:03 PM IST
ವಿಧವೆಯ ವಂಚಿಸಿದ ಕರವೇ ಕಾರ್ಯಕರ್ತ ರಾಜೇಶ್

ಸಾರಾಂಶ

ವಿಕಲಾಂಗ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದ ವಿಧವೆಗೆ ಕರವೇ ಕಾರ್ಯಕರ್ತನೋರ್ವ ಲಕ್ಷಾಂತರ ರೂಪಾಯಿ ವಂಚಿಸಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು(ಜೂ.11): ವಿಕಲಾಂಗ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದ ವಿಧವೆಗೆ ಕರವೇ ಕಾರ್ಯಕರ್ತನೋರ್ವ ಲಕ್ಷಾಂತರ ರೂಪಾಯಿ ವಂಚಿಸಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪಾರ್ವತಿ ಎಂಬಾ ಮಹಿಳೆ 2011ರಲ್ಲಿ ಉಮೇಶ್ ಎಂಬಾತನನ್ನು ಪ್ರೀತಿಸಿ ಮನೆಯವರ ವಿರೋಧದ ಮಧ್ಯೆ ಮದುವೆಯಾಗಿದ್ಲು. ಆದ್ರೆ 2016 ರಲ್ಲಿ ಉಮೇಶ್ ಅಪಘಾತದಿಂದ ಸಾವಿಗೀಡಾಗಿದ್ದು, ಪಾರ್ವತಿ ನೆರವಿಗೆ ಯಾರು ಇರೋದಿಲ್ಲ.ಅಷ್ಟೇ ಅಲ್ಲದೇ ಇವರು ಉಳಿದುಕೊಂಡಿದ್ದ ಮನೆಯ ಅಡ್ವಾನ್ಸ್ ಹಣ ಮತ್ತು ಉಮೇಶ್ ಬೈಕನ್ನು ಕೂಡ ಉಮೇಶ್ ಪೋಷಕರು ಕಿತ್ತುಕೊಂಡು ಹೋಗಿರುತ್ತಾರೆ.

ಈ ವೇಳೆ ಪಾರ್ವತಿಗೆ ನ್ಯಾಯ ಕೊಡಿಸುತ್ತೇವೆ ಎಂದು ಬಂದ ರಾಜೇಶ್, ಮೊದಲು 90 ಸಾವಿರ ಕೀಳುತ್ತಾನೆ. ಬಳಿಕ ಸರ್ಕಾರದಿಂದ ಲೋನ್ ಕೊಡಿಸುತ್ತೇನೆ ಎಂದು 1 ಲಕ್ಷ ಕೀಳುತ್ತಿದ್ದಾನೆ. ಆದರೆ ಇದುವರೆಗೂ ಲೋನೂ ಇಲ್ಲ, ಯಾವ ಪರಿಹಾರವನ್ನೂ ಕೊಡಿಸಿಲ್ಲ. ಹಣ ವಾಪಸ್ ಕೇಳಲು ಹೋದರೆ ಬಾಯಿಗೆ ಬಂದಹಾಗೆ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾನೆ . ನನ್ನ ಹಣವನ್ನು ರಾಜೇಶ್'​​ನಿಂದ  ವಾಪಸ್ ಕೊಡಿಸಿ ಅಂತಾ ಮೋಸಹೋದ ಪಾರ್ವತಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?