ಅ.8ರಿಂದ ಹೊರನಾಡ ಕನ್ನಡಿಗರ ಸಮಾವೇಶ

Published : Oct 04, 2016, 11:04 AM ISTUpdated : Apr 11, 2018, 12:54 PM IST
ಅ.8ರಿಂದ ಹೊರನಾಡ ಕನ್ನಡಿಗರ ಸಮಾವೇಶ

ಸಾರಾಂಶ

ಬೆಂಗಳೂರು (ಅ.04):  ಹೊರನಾಡ ಕನ್ನಡಿಗರು ಎದುರಿಸು​ತ್ತಿ​ರು​ವ ಸಮಸ್ಯೆಗಳಿಗೆ ಪರಿಹಾರ ಕಂಡು​ಹಿಡಿ​ಯು​ವ ಆಶಯದಿಂದ ಅ.8, 9ರಂದು ದೆಹಲಿ​ಯಲ್ಲಿ ಪ್ರಥಮ ಬಾರಿಗೆ ಹೊರ​ನಾಡ ಕನ್ನಡಿಗರ ಸಮಾವೇಶ ಏರ್ಪಡಿ​ಸ​ಲಾ​ಗಿದೆ.

ಇದರಲ್ಲಿ ಗೋವಾ, ಮಹಾ​ರಾಷ್ಟ್ರ, ಮಧ್ಯಪ್ರದೇಶ ಮುಂತಾ​​ದ 14 ರಾಜ್ಯಗಳಲ್ಲಿರುವ ಅಂದಾ​​ಜು 600 ಪ್ರತಿನಿಧಿಗಳು ಪಾಲ್ಗೊ​ಳ್ಳ​​​ಲಿ​​ದ್ದಾರೆ ಎಂದು ಕನ್ನಡ ಸಾಹಿತ್ಯ ಪರಿ​ಷ​ತ್ತಿ​ನ ಅಧ್ಯಕ್ಷ ಮನು ಬಳಿಗಾರ್‌ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾ​ಗೋಷ್ಠಿ​ಯಲ್ಲಿ ಮಾತನಾಡಿ, ‘‘ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ನಡೆ​ಯ​​ಲಿರುವ ಈ ಸಮಾವೇಶಕ್ಕೆ ಛತ್ತೀಸ್‌​ಗಡ​ದ ಅಮರ್‌ಕಂಟಕ್‌ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿಯ ಕುಲಪತಿ​ಯಾ​ಗಿ​ರುವ ಕನ್ನಡಿ​ಗರಾದ ಡಾ.ತೇಜಸ್ವಿ ಕಟ್ಟೀ​ಮನಿ ವಿಶೇಷ ಆಸಕ್ತಿಯಿಂದ ಸಮಾವೇಕ್ಕೆ ವಿವಿಯು ಧನ ಸಹಾಯದ ಸಹಯೋಗ ನೀಡಿದೆ. ಸಮಾ​ವೇಶದಲ್ಲಿ ಮಂಡನೆಯಾಗುವ ವಿಚಾರ​ಗಳನ್ನು ಪುಸ್ತಕ ರೂಪದಲ್ಲಿ ತರುವ ಆಲೋಚನೆ ಇದೆ'' ಎಂದು ಅವರು ಹೇಳಿದ್ದಾರೆ.

‘‘ಸಮ್ಮೇಳನದಲ್ಲಿ ಆಹ್ವಾನಿತರಾಗಿ ಪಾಲ್ಗೊಳ್ಳಲಿರುವ 23 ಸಾಹಿತಿ/ಕಲಾವಿದರನ್ನು ಕರ್ನಾಟಕ ಸರ್ಕಾರ ರಾಜ್ಯ ಅತಿಥಿಗಳೆಂದು ಪರಿಗಣಿಸಿದ್ದು, ಅವರೆಲ್ಲರ ಊಟ, ವಸತಿಗಳಿಗೆ ಕರ್ನಾಟಕ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. 40 ವರ್ಷಗಳ ಹಿಂದೆ ಜಿ.ಪಿ. ರಾಜರತ್ನಂ ಅಧ್ಯಕ್ಷತೆಯಲ್ಲಿ ದೆಹಲಿ​ಯಲ್ಲಿ 50ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದನ್ನು ಹೊರತುಪಡಿಸಿದರೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಂಥ ಸಮಾವೇಶ ನಡೆಯುತ್ತಿರುವುದು ಇದೇ ಮೊದಲು'' ಎಂದು  ಬಳಿಗಾರ್‌ ಹೇಳಿದ್ದಾರೆ.

‘‘ಭಾಷಾವಾರು ಪ್ರಾಂತ ರಚನೆ, ಶಿಕ್ಷಣ ಮಾಧ್ಯಮ, ಜಲ ವಿವಾದಗಳು, ಹೊರನಾಡ ಕನ್ನಡಿ​ಗರ ಸಮಸ್ಯೆಗಳು, ರಾಷ್ಟ್ರೀಯ ಉದ್ಯೋಗ ನೀತಿ, ವರ್ತಮಾನದ ತಲ್ಲಣ​​ಗಳು ವಿಷಯಗಳ ಕುರಿತ ಗೋಷ್ಠಿ​ಗಳಿ​ವೆ. ಜತೆಗೆ ಕವಿಗೋಷ್ಠಿ, ಜನಪದ ಗೀತೆ​ಗಳ ಗಾಯನ ಗೋಷ್ಠಿ, ಭರತನಾಟ್ಯ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯ​ಕ್ರಮಗಳೂ ನಡೆ​ಯಲಿವೆ'' ಎಂದು ಅವರು ವಿವರಿಸಿದ್ದಾರೆ.

ಸಾಹಿತ್ಯ ಸಮ್ಮೇಳನಕ್ಕೂ ಸಿದ್ಧತೆ: ‘‘ಏತನ್ಮಧ್ಯೆ ಡಿಸೆಂಬರ್‌ನಲ್ಲಿ ರಾಯ​ಚೂ​ರಿ​​ನಲ್ಲಿ ನಡೆಯಲಿರುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಸಿದ್ಧತೆ​ಗಳು ನಡೆ​ದಿ​ದ್ದು, ಅಲ್ಲಿ ನಡೆಯ​ಬೇಕಾಗಿರುವ ಅಗತ್ಯ ಕಾಮಗಾರಿಗಳಿಗೆ ಸರ್ಕಾರ ಈಗಾ​ಗ​ಲೇ .4 ಕೋಟಿ ಬಿಡುಗಡೆ ಮಾಡಿದೆ. ಪ್ರತಿ​ದಿನವೂ 60ರಿಂದ 70 ಸಾವಿರ ಜನ ಪಾಲ್ಗೊ​ಳ್ಳಲಿರುವ ಈ ಸಮ್ಮೇಳನಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲು ಪ್ರಯತ್ನಿಸ​ಲಾಗುತ್ತಿದೆ'' ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!