‘ಅಮ್ಮ’ನ ಆರೋಗ್ಯಕ್ಕಾಗಿ ಅಭಿಮಾನಿಗಳಿಂದ ಚಾಮುಂಡಿ ದೇವಿಗೆ ಭರ್ಜರಿ ಕಾಣಿಕೆ

Published : Oct 21, 2016, 03:53 PM ISTUpdated : Apr 11, 2018, 01:08 PM IST
‘ಅಮ್ಮ’ನ ಆರೋಗ್ಯಕ್ಕಾಗಿ ಅಭಿಮಾನಿಗಳಿಂದ ಚಾಮುಂಡಿ ದೇವಿಗೆ ಭರ್ಜರಿ ಕಾಣಿಕೆ

ಸಾರಾಂಶ

ಜೊತೆಗೆ  ದೇವಸ್ಥಾನದ ಆವರಣದಲ್ಲಿರುವ ಆಂಜನೇಯ ಮತ್ತು ಗಣೇಶ ದೇವರಿಗೆ ಚಿನ್ನ ಹಾಗೂ ಬೆಳ್ಳಿ ಕವಚಗಳನ್ನೂ ಕಾಣಿಕೆ ರೂಪದಲ್ಲಿ ಸಮರ್ಪಿಸಿದರು.

ಮೈಸೂರು(ಅ.21):  ತಮಿಳುನಾಡು ಸಿಎಂ ಜಯಲಲಿತಾ  ಶೀಘ್ರ ಗುಣಮುಖರಾಗಲಿ ಅಂತಾ ಅವರ ಬೆಂಬಲಿಗರು ದೇವರ ಮೊರೆ ಹೋಗುತ್ತಿದ್ದಾರೆ.  ಇಂದು  ಜಯಲಲಿತಾ ಅವರ ಬೆಂಬಲಿಗರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಬರೋಬ್ಬರಿ ೧ಕೋಟಿ,೬೦ ಲಕ್ಷದ ೭೭ಸಾವಿರದ ಕಾಣಿಕೆಯನ್ನು  ದೇವಿಗೆ ಕಾಣಿಕೆ ರೂಪದಲ್ಲಿ  ಸಲ್ಲಿಸಿದರು. ಜೊತೆಗೆ  ದೇವಸ್ಥಾನದ ಆವರಣದಲ್ಲಿರುವ ಆಂಜನೇಯ ಮತ್ತು ಗಣೇಶ ದೇವರಿಗೆ ಚಿನ್ನ ಹಾಗೂ ಬೆಳ್ಳಿ ಕವಚಗಳನ್ನೂ ಕಾಣಿಕೆ ರೂಪದಲ್ಲಿ ಸಮರ್ಪಿಸಿದರು. ಜಯಾ ಪಬ್ಲಿಕೇಷನ್ಸ್ ಮತ್ತು ಕೊಡನಾಡ್ ಎಸ್ಟೇಟ್ ಹೆಸರಿನಲ್ಲಿ ಈ ಕಾಣಿಕೆಯನ್ನು ಸಲ್ಲಿಸಲಾಯಿತು. ಈ ಹಿಂದೆ ಮೈಸೂರಿಗೆ ಜಯಲಲಿತಾ ಬಂದಿದ್ದ ವೇಳೆ ಹರಕೆ ಹೊತ್ತಿದ್ದರು. ಇಂದು  ಅವರ  ಬೆಂಬಲಿಗರು ಹರಕೆ ತೀರಿಸಿದರು. ಜೊತೆಗೆ ಜಯಾ ಶೀಘ್ರ ಗುಣಮುಖರಾಗಲಿ ಅಂತಾ ಪ್ರಾರ್ಥಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಟ್ಕಳ ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ: ಇಮೇಲ್‌ನಲ್ಲಿ ಡಿಎಂಕೆ ವಿರುದ್ಧ ಅಸಂಬದ್ಧ ಆರೋಪ
ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ