ಆಸ್ಪತ್ರೆ ಸೇರಿದ ಕಾಂಗ್ರೆಸ್ ಶಾಸಕ : ವಿಶ್ವಾಸಮತಕ್ಕೆ ಗೈರು

Published : Jul 18, 2019, 12:59 PM ISTUpdated : Jul 18, 2019, 04:19 PM IST
ಆಸ್ಪತ್ರೆ ಸೇರಿದ ಕಾಂಗ್ರೆಸ್ ಶಾಸಕ : ವಿಶ್ವಾಸಮತಕ್ಕೆ ಗೈರು

ಸಾರಾಂಶ

ಕಾಂಗ್ರೆಸ್ ಶಾಸಕರೋರ್ವರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದು, ವಿಶ್ವಾಸ ಮತದ ವೇಳೆ ಸದನಕ್ಕೆ ಗೈರಾಗಿದ್ದಾರೆ. ಈ ಮೂಲಕ ಮೈತ್ರಿ ಪಾಳಯದ ಬಲ ಇನ್ನಷ್ಟು ಕಡಿಮೆಯಾದಂತಾಗಿದೆ. 

ಬೆಂಗಳೂರು[ಜು.18] : ಈಗಾಗಲೇ ಅತೃಪ್ತರಾಗಿ ಹಲವು ಮುಂಬೈ ಸೇರಿರುವ ಶಾಸಕರ ಜೊತೆಗೆ ಮತ್ತೋರ್ವ ಕಾಂಗ್ರೆಸ್ ಶಾಸಕ ಕೂಡ ಸದನಕ್ಕೆ ಗೈರಾಗಿದ್ದಾರೆ.ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಶ್ರೀಮಂತ ಪಾಟೀಲ್ ಸ್ಪೀಕರ್ ಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. 

"

ಕರ್ನಾಟಕ ರಾಜಕೀಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಳ್ಳುತ್ತಿರುವ ಫೋಟೋ ಕಳುಹಿಸಿದ್ದು, ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿ, ಈ ನಿಟ್ಟಿನಲ್ಲಿ ತಮಗೆ ಸದನಕ್ಕೆ ಹಾಜರಾಗಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ಬುಧವಾರವಷ್ಟೇ ರೆಸಾರ್ಟ್ ನಿಂದ ಕಣ್ ತಪ್ಪಿಸಿ ತೆರಳಿದ್ದ ಶಾಸಕ ಇದೀಗ ಆಸ್ಪತ್ರೆಯಲ್ಲಿದ್ದು, ಇದರಿಂದ ಅತೃಪ್ತರೊಂದಿಗೆ ಮತ್ತೋರ್ವ ಕೈ ಶಾಸಕ ಗೈರಾಗುವ ಮೂಲಕ ಮೈತ್ರಿ ಪಾಳಯದ ಬಲ ಇನ್ನಷ್ಟು ಕುಸಿಯುವಂತೆ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?