ನೋಡ್ಕೊಂಡು ಬಾರೋ ಅಂದ್ರೆ ಓಡಿಸ್ಕೊಂಡೇ ಹೋದ, ಈಗ ಜೈಲೇ ಗತಿ!

Published : Jun 02, 2017, 03:14 PM ISTUpdated : Apr 11, 2018, 12:45 PM IST
ನೋಡ್ಕೊಂಡು ಬಾರೋ ಅಂದ್ರೆ ಓಡಿಸ್ಕೊಂಡೇ ಹೋದ, ಈಗ ಜೈಲೇ ಗತಿ!

ಸಾರಾಂಶ

ಮಧ್ಯಪ್ರದೇಶದ ವಿದಿಶಾದಲ್ಲಿ ಯುವಕನೊಬ್ಬ ಮದುವೆಯಾಗಲು ನೋಡಲು ಹೋದ ಹುಡುಗಿಯೊಂದಿಗೇ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಆದರೆ ಹುಡುಗಿಯ ವಯಸ್ಸಿನ್ನೂ 14 ವರ್ಷ ಎಂದು ತಿಳಿದು ಬಂದಿದೆ. ಈ ಪ್ರಕರಣದಿಂದ ಅಪ್ರಾಪ್ತ ಬಾಲಕಿಗೆ ಮದುವೆ ಮಾಡ ಹೊರಟ ಕುಟುಂಬಸ್ಥರೂ ಸಂಕಷ್ಟಕ್ಕೀಡಾಗಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಹುಡುಗಿಯನ್ನು ನೋಡಲು ಬಂದ ವೇಳೆ ಇಬ್ಬರೂ ಒಬ್ಬನ್ನೊಬ್ಬರು ಇಷ್ಟಪಟ್ಟಿದ್ದರು. ಆದರೆ ಕುಟುಂಬಸ್ಥರಿಗೆ ಈ ಸಂಬಂಧದ ಕುರಿತಾಗಿ ಅಸಮಾಧಾನವಿತ್ತು, ಹೀಗಾಗಿ ಮದುವೆಗೆ ಹಿರಿಯರು ಒಪ್ಪಿಗೆ ಸೂಚಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶ(ಜೂ.02): ಮಧ್ಯಪ್ರದೇಶದ ವಿದಿಶಾದಲ್ಲಿ ಯುವಕನೊಬ್ಬ ಮದುವೆಯಾಗಲು ನೋಡಲು ಹೋದ ಹುಡುಗಿಯೊಂದಿಗೇ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಆದರೆ ಹುಡುಗಿಯ ವಯಸ್ಸಿನ್ನೂ 14 ವರ್ಷ ಎಂದು ತಿಳಿದು ಬಂದಿದೆ. ಈ ಪ್ರಕರಣದಿಂದ ಅಪ್ರಾಪ್ತ ಬಾಲಕಿಗೆ ಮದುವೆ ಮಾಡ ಹೊರಟ ಕುಟುಂಬಸ್ಥರೂ ಸಂಕಷ್ಟಕ್ಕೀಡಾಗಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಹುಡುಗಿಯನ್ನು ನೋಡಲು ಬಂದ ವೇಳೆ ಇಬ್ಬರೂ ಒಬ್ಬನ್ನೊಬ್ಬರು ಇಷ್ಟಪಟ್ಟಿದ್ದರು. ಆದರೆ ಕುಟುಂಬಸ್ಥರಿಗೆ ಈ ಸಂಬಂಧದ ಕುರಿತಾಗಿ ಅಸಮಾಧಾನವಿತ್ತು, ಹೀಗಾಗಿ ಮದುವೆಗೆ ಹಿರಿಯರು ಒಪ್ಪಿಗೆ ಸೂಚಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಇಬ್ಬರಿಗೂ ಮೊದಲ ನೋಟದಲ್ಲೇ ಪರಸ್ಪರ ಪ್ರೀತಿ ಹುಟ್ಟಿಕೊಂಡಿತ್ತು. ಹೀಗಿರುವಾಗ ತನ್ನ ಅತ್ತಿಗೆಯೊಂದಿಗೆ ಹುಡುಗಿ ಒಂದು ದಿನ ಮಾರುಕಟ್ಟೆಗೆ ಹೋಗಿದ್ದ ವೇಳೆ ಮತ್ತೆ ಯುವಕನೊಂದಿಗೆ ಭೇಟಿಯಾಗಿದೆ. ಈ ವೇಳೆ ಸಂದರ್ಭ ನೋಡಿ ಇಬ್ಬರೂ ಪರಾರಿಯಾಗಿದ್ದಾರೆ. ವಿಚಾರ ತಿಳಿದ ಮನೆಯವರು ಬೆಚ್ಚಿ ಬಿದ್ದಿದ್ದಲ್ಲದೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಕಷ್ಟು ಹುಡುಕಾಟ ನಡೆಸಿದರೂ ಪರಾರಿಯಾದ ಪ್ರೇಮಿಗಳು ಮಾತ್ರ ಸಿಗಲೇ ಇಲ್ಲ. ಅಷ್ಟರಲ್ಲೇ ಹುಡುಗಿಯ ಅಣ್ಣನ ಸ್ನೇಹಿತನೊಬ್ಬ 'ನಿನ್ನ ತಂಗಿಯನ್ನು ಓರ್ವ ಯುವಕನೊಂದಿಗೆ ನೋಡಿರಿರುವುದಾಗಿ ತಿಳಿಸಿದ್ದಲ್ಲದೇ ತಾನವರನ್ನು ನೋಡಿದ ಸ್ಥಳದ ವಿವರಣೆಯನ್ನೂ ನೀಡಿದ್ದಾನೆ. ಆತ ನೀಡಿದ ವಿವರಣೆಯೊಂದಿಗೆ ಸ್ಥಳಕ್ಕೆ ತಲುಪಿದಾಗ ಇಬ್ಬರು ಆ ಸ್ಥಳದಲ್ಲಿ ಪತ್ತೆಯಾಗಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಅಪಹರಿಸಿರುವ ಪ್ರಕರಣದಡಿ ಪೊಲೀಸರು ಯುವಕನನ್ನುಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ಬಳಿಕ ಆತನನ್ನು ಜೈಲಿಗಟ್ಟಿದ್ದಾರೆ. ಆದರೆ ಬಾಲಕಿ ಮಾತ್ರ ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿರುವುದಾಗಿ ವಾದಿಸುತ್ತಿದ್ದಾಳೆ.

ಕೃಪೆ: NDTv

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನದಿ ಜೋಡಣೆ-ನೀರಾವರಿ ಚರ್ಚೆಗೆ ಡಿ.ಕೆ.ಶಿವಕುಮಾರ್‌ ದೆಹಲಿಗೆ: ಎಐಸಿಸಿ ನಾಯಕರ ಭೇಟಿ ಸಾಧ್ಯತೆ
India Latest News Live: 5 ವರ್ಷಗಳಲ್ಲಿ 2400 ವಿಮಾನಗಳಲ್ಲಿ ದೋಷ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ