
ಬೆಂಗಳೂರು (ಡಿ.10): ಕನ್ನಡ ಚಿತ್ರರಂಗ ಕಂಡ ಮಹಾನ್ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್. ಅವರು ತಮ್ಮ ಜೀವನದ ಕಥೆಯನ್ನ ತಾವೇ ಹೇಳಿರುವ ಕಥಾ ಹಂದರ ಹೊಂದಿರುವ ‘ನಾನು ಪಾರ್ವತಿ’ ಪುಸ್ತಕ ಇಂದು ಬಿಡುಗಡೆಯಾಯಿತು.
ಪಾರ್ವತಮ್ಮನವರು ಇದ್ದಾಗ ಹೇಳಿದ ಅನುಭವದ ಕಥನವನ್ನು ಸಾಹಿತಿ ಮತ್ತು ಪತ್ರಕರ್ತ ಜೋಗಿ ನಿರೂಪಿಸಿದ್ದಾರೆ. ಚಿತ್ರಲೋಕದ ಕೆ.ಎಂ.ವೀರೇಶ್ ಈಗ ‘ನಾನು ಪಾವರ್ತಿ’ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಪುಸ್ತಕದ ಬಿಡುಗಡೆಗೆ ಕಿಚ್ಚ ಸುದೀಪ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಆಗಮಿಸಿದ್ದರು. ರಾಜ್ ಫ್ಯಾಮಿಲಿಯ ಸದಸ್ಯರೂ ಭಾಗವಹಿಸಿದ್ದರು. ನಿರ್ದೇಶಕ ಭಗವಾನ್, ಸಾ.ರಾ.ಗೋವಿಂದು, ನಟಿ ಜಯಮಾಲಾ, ಕನ್ನಡ ಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.