
ಬೆಂಗಳೂರು (ಮಾ. 27): ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಸಾರ್ವಜನಿಕ ಸಭೆಯ ಭಾಷಣ ಮತ್ತು ಮೀಡಿಯಾ ಬೈಟ್ ನಡುವೆ ವ್ಯತ್ಯಾಸ ಏನಿರುವುದಿಲ್ಲ. ಮೊನ್ನೆ ಸಂಸತ್ ಭವನದ ಹೊರಗೆ ಬೈಟ್ ಕೊಡುವಾಗ ಗಟ್ಟಿಯಾಗಿ
ಕೂಗುತ್ತ ಹೇಳಿಕೆ ಕೊಡುತ್ತಿದ್ದ ಶೋಭಾರಿಗೆ ಪತ್ರಕರ್ತರು, ‘ಮೇಡಂ ಚುನಾವಣೆ ಸಭೆಗಳಿವೆ, ಅಲ್ಲಿ ಎನರ್ಜಿ ಬೇಕು, ಎಲ್ಲವನ್ನೂ ಇಲ್ಲೇ ಖರ್ಚು ಮಾಡಬೇಡಿ’ ಎಂದು ಹೇಳಿದರು.
ದಕ್ಷಿಣ ಕನ್ನಡದ ಒಬ್ಬ ಪತ್ರಕರ್ತರು ‘ಮೇಡಂ ನೀವು ಯಕ್ಷಗಾನ ಪಾತ್ರ ಮಾಡಬೇಕು. ನಿಮ್ಮ ಕಂಠ ಹೇಳಿಮಾಡಿಸಿದ ಹಾಗೆ ಇದೆ’ ಎನ್ನಬೇಕೆ! ಪತ್ರಕರ್ತರ ಸಲಹೆ ಕೇಳಿದ ಶೋಭಾ, ಹೌದು ಹೀಗೆ ಗಟ್ಟಿಯಾಗಿ ಕೂಗಿ ಕೂಗಿ ಗಂಟಲು ಆಗಾಗ ಕೈ ಕೊಡುತ್ತದೆ ಎಂದು ಒಪ್ಪಿಕೊಂಡರು. ಆದರೆ ಅಭ್ಯಾಸ ಬದಲಿಸುವುದು ಅಷ್ಟು ಸುಲಭ ಅಲ್ಲ ನೋಡಿ.
ರಾಜಕೀಯ ಸುದ್ದಿಗಳಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.