ಕೋರ್ಟ್’ನಲ್ಲಿ ಲಾಲೂ – ಜಡ್ಜ್ ನಡುವೆ ಹಾಸ್ಯ ಸಂವಾದ ಹೇಗಿತ್ತು..?

Published : Jan 07, 2018, 10:19 AM ISTUpdated : Apr 11, 2018, 12:58 PM IST
ಕೋರ್ಟ್’ನಲ್ಲಿ ಲಾಲೂ – ಜಡ್ಜ್ ನಡುವೆ ಹಾಸ್ಯ ಸಂವಾದ ಹೇಗಿತ್ತು..?

ಸಾರಾಂಶ

ರ್‌ಜೆಡಿ ನಾಯಕ ಲಾಲು ಮಾತಿಗಿಳಿದರೆ ಅಲ್ಲಿಯ ನಗೆಯ ಬುಗ್ಗೆ ಖಚಿತ. ಆದರೆ ಅವರ ಈ ಮಾತಿನ ಲಾಸ್ಯ ಜೈಲಲ್ಲೂ ಮುಂದುವರೆದಿದೆ. ವಿಶೇಷವೆಂದರೆ ಅವರ ಈ ಹಾಸ್ಯದ ಮಾತಿಗೆ ಇದೀಗ, ಮೇವು ಹಗರಣದ ತೀರ್ಪು ನೀಡಿದ ನ್ಯಾಯಮೂರ್ತಿಗಳೂ ಸಾಥ್ ನೀಡಿದ್ದಾರೆ.

ರಾಂಚಿ: ಆರ್‌ಜೆಡಿ ನಾಯಕ ಲಾಲು ಮಾತಿಗಿಳಿದರೆ ಅಲ್ಲಿಯ ನಗೆಯ ಬುಗ್ಗೆ ಖಚಿತ. ಆದರೆ ಅವರ ಈ ಮಾತಿನ ಲಾಸ್ಯ ಜೈಲಲ್ಲೂ ಮುಂದುವರೆದಿದೆ. ವಿಶೇಷವೆಂದರೆ ಅವರ ಈ ಹಾಸ್ಯದ ಮಾತಿಗೆ ಇದೀಗ, ಮೇವು ಹಗರಣದ ತೀರ್ಪು ನೀಡಿದ ನ್ಯಾಯಮೂರ್ತಿಗಳೂ ಸಾಥ್ ನೀಡಿದ್ದಾರೆ. ಮೇವು ಹಗರಣದ ಶಿಕ್ಷೆ ಪ್ರಮಾಣಕ್ಕೆ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ಲಾಲು ಹಾಜರಾಗಿದ್ದರು. ಈ ವೇಳೆ ಜಡ್ಜ್‌ಗೆ ಲಾಲು ಮಾಡಿದ ಮನವಿ ಮತ್ತು ಅದಕ್ಕೆ ನ್ಯಾ. ಶಿವಪಾಲ್ ಸಿಂಗ್ ನೀಡಿದ ಉತ್ತರಗಳು ನಗೆ ಬುಗ್ಗೆಗೆ ಕಾರಣವಾಗಿದೆ.

ಲಾಲು: ನನಗೆ ಜೈಲಿನಲ್ಲಿ ತುಂಬಾ ಚಳಿಯಾಗುತ್ತಿದೆ. ಏನಾದರೂ ವ್ಯವಸ್ಥೆ ಮಾಡಿ.

ಜಡ್ಜ್: ನಿಮಗೆ ಚಳಿಯಾದರೆ ಹಾರ್ಮೊನಿಯಂ ಮತ್ತು ತಬಲಾ ಬಾರಿಸಿ ಬೆಚ್ಚಿಗಿರಿ.

ಲಾಲು: ಹಿಜಡಾ ಕೈದಿಯೊಬ್ಬ ಇತರ ಕೈದಿಗಳಿಗೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದಾನೆ.

ಜಡ್ಜ್: ಈಗ ನೀವಿದ್ದೀರಲ್ಲ. ಎಲ್ಲವೂ ಬಗೆಹರಿಯುತ್ತೆ.

ಲಾಲು: ನನಗೆ ವಯಸ್ಸಾಗಿದೆ. ಅನಾರೋಗ್ಯ ಕಾಡುತ್ತಿದೆ. ಇದನ್ನೆಲ್ಲಾ ಪರಿಗಣಿಸಿ ಶಾಂತಿಯಿಂದ ಶಿಕ್ಷೆ ಪ್ರಮಾಣ ನಿಗದಿ ಮಾಡಿ.

ಜಡ್ಜ್: ನಿಮ್ಮ ಹಿತೈಷಿಗಳಿಂದಲೂ ನನಗೆ ಕರೆಗಳು ಬಂದಿವೆ. ಚಿಂತೆ ಮಾಡಬೇಡಿ ನಾನು ಕಾನೂನನ್ನು ಮಾತ್ರ ಪಾಲಿಸುತ್ತೇನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ