ವಯಸ್ಸಾದ ಮೋದಿ ರಾಜಕೀಯ ನಿವೃತ್ತಿ ಪಡೆಯಲಿ: ಜಿಗ್ನೇಶ್

Published : Dec 20, 2017, 03:55 PM ISTUpdated : Apr 11, 2018, 12:50 PM IST
ವಯಸ್ಸಾದ ಮೋದಿ ರಾಜಕೀಯ ನಿವೃತ್ತಿ ಪಡೆಯಲಿ: ಜಿಗ್ನೇಶ್

ಸಾರಾಂಶ

* ಕರ್ನಾಟಕದಲ್ಲಿ ಗೌರಿ ಹತ್ಯೆಯಾದಾಗ 'ಇಂಥ ಮಗನನ್ನು ಹೆತ್ತಿದ್ದೇಕೆ?' ಎಂದು ಮೋದಿ ತಾಯಿಗೆ ಪ್ರಶ್ನಿಸೋಣ ಎಂದ ಜಿಗ್ನೇಶ್ *ದಲಿತ ಮುಖಂಡನಾಗಿ ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಗೆಲವು ಸಾಧಿಸಿದ ಮೇವಾನಿ *ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಶ್ರಮಿಸಿದವರಲ್ಲಿ ಜಿಗ್ನೇಶ್ ಸಹ ಒಬ್ಬರು.

ಅಹ್ಮದಾಬಾದ್: ಗುಜರಾತ್‌ನಲ್ಲಿ ಆರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಸೋತರೂ ಕಾಂಗ್ರೆಸ್ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಪ್ರಧಾನಿ ಮೋದಿಗೆ ಬುದ್ಧಿವಾದ ಹೇಳಿದ್ದಾರೆ.


'ಮೋದಿಗೆ ವಯಸ್ಸಾಗಿದ್ದು, ಹೇಳಿದ್ದೇ ಹೇಳುತ್ತಾರೆ. ಅದೇ ಭಾಷಣಗಳಿಂದ ಜನರು ಬೇಸತ್ತಿದ್ದು, ಅವರೀಗ ರಾಜಕೀಯ ನಿವೃತ್ತಿ ಪಡದರೆ ಒಳಿತು,' ಎಂದು ಹೇಳಿದ್ದಾರೆ.


ಇಂಗ್ಲಿಷ್ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಮೇವಾನಿ, 'ಕಾಂಗ್ರೆಸ್ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಿದ್ದರಿಂದ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದಿದ್ದು, ಮೋದಿ ಹೇಳುವಂತೆ ಜಾತಿ ರಾಜಕಾರಣದಿಂದ ಅಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ.


ರಾಜ್ಯದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ, 'ಮೋದಿ ಅವರ ತಾಯಿ ಬಳಿ ಹೋಗಿ ಇಂಥ ಮಗನನ್ನು ಹೆತ್ತಿದ್ದು ಏಕೆಂದು ಪ್ರಶ್ನಿಸೋಣ,' ಎಂಬ ಹೇಳಿಕೆ ನೀಡಿ, ಜಿಗ್ನೇಶ್ ಸುದ್ದಿಯಾಗಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?
ಸಿಂಗಾಪುರದ ಕೋತಿ ಬ್ಯೂಟಿಗೆ ಮನಸೋತ ಯುವತಿ: ಇದು ಕಾಸ್ಟ್ಯುಮ್ ಅಲ್ಲ ದೇವರೇ ಕೊಡಿಸಿದ ಸೊಗಸಾದ ಬಟ್ಟೆ