
ಜಾರ್ಖಂಡ್[ಆ.30]: ಮಾಡಿದ್ದುಣ್ಣೋ ಮಹಾರಾಯ ಎಂಬ ಮಾತಿದೆ. ಈ ಮಾತು ಜಾರ್ಖಂಡ್ ಸಾರಿಗೆ ಸಚಿವ ಸಿ.ಪಿ. ಸಿಂಗ್ ಅವರ ವಿಷಯದಲ್ಲಿ ನಿಜವಾಗಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದಕ್ಕಾಗಿ ಸಚಿವರು 100 ರು. ದಂಡ ಕಟ್ಟಿದ್ದಾರೆ.
ವಿಶೇಷವೆಂದರೆ, ಟ್ರಾಫಿಕ್ ಸಂಚಾರ ನಿಗಾ ವ್ಯವಸ್ಥೆಯನ್ನು ಅವರೇ ಜಾರಿಗೆ ತಂದಿದ್ದರು. ಸಿ.ಪಿ.ಸಿಂಗ್ ಅವರ ಕಾರು ಜು.23ರಂದು ರಾಂಚಿಯ ಸರ್ಜಾನಾ ಚೌಕ್ನಲ್ಲಿ ಸಿಗ್ನಲ್ ಜಂಪ್ ಮಾಡಿದ್ದು ಟ್ರಾಫಿಕ್ ನಿಗಾ ವ್ಯವಸ್ಥೆಯಿಂದ ಪತ್ತೆಯಾಗಿತ್ತು. ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್ ಯಂತ್ರ ಸಚಿವರ ಮನೆಗೆ ದಂಡ ಪಾವತಿಸುವಂತೆ ರಸೀದಿ ರವಾನಿಸಿತ್ತು.
ಕೊನೆಗೆ ಸಚಿವರ ಚಾಲಕ ದಂಡ ಪಾವತಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.