‘ಸಿಬಿಐ ಇಲ್ಲದಿದ್ದರೆ ಅದರ ಅಪ್ಪನ ಕರೆದುಕೊಂಡು ಬರ್ಲಿ..ನಾನ್ ಹೆದರಲ್ಲ’

Published : Sep 20, 2019, 08:31 PM IST
‘ಸಿಬಿಐ ಇಲ್ಲದಿದ್ದರೆ ಅದರ ಅಪ್ಪನ ಕರೆದುಕೊಂಡು ಬರ್ಲಿ..ನಾನ್ ಹೆದರಲ್ಲ’

ಸಾರಾಂಶ

ಬಿಜೆಪಿ ಮತ್ತು ಬಿಎಸ್ ಯಡಿಯೂರಪ್ಪ ಮೇಲೆ ವಾಗ್ದಾಳಿ ಮಾಡಿದ ಎಚ್ ಡಿ ಕುಮಾರಸ್ವಾಮಿ/ ದ್ವೇಷದ ರಾಜಕಾರಣ ಮಾಡಲ್ಲ ಎಂದವರು ಈಗೇನು ಮಾಡುತ್ತಿದ್ದಾರೆ? ಹಳೆ ಸರ್ಕಾರದ ಯೋಜನೆಗಳನ್ನು ಕಾರಣವಿಲ್ಲದೆ ನಿಲ್ಲಿಸಲಾಗಿದೆ.

ಮೈಸೂರು[ಸೆ. 20] ಯಡಿಯೂರಪ್ಪ ಅವರ ಅಪ್ಪನ ಮನೆ ದುಡ್ಡಿನಲ್ಲಿ ನೆರೆ ಪರಿಹಾರ ಮಾಡುತ್ತಿಲ್ಲ. ಒಂದೇ ರಾತ್ರಿಯಲ್ಲಿ ಶಿಕಾರಿಪುರಕ್ಕೆ ಒಂದು ಸಾವಿರ ಕೋಟಿ ಕೊಟ್ಟಿದ್ದಾರೆ. ಅದು ಯಡಿಯೂರಪ್ಪ ಸಂಪಾದನೆ ಮಾಡಿದ ದುಡ್ಡ? ಎಂದು  ಪ್ರಶ್ನೆ ಮಾಡಿದರು.

ನಾನು ಪಕ್ಷಾತೀತವಾಗಿ ಎಲ್ಲಾ ಕ್ಷೇತ್ರಕ್ಕೂ ಅನುದಾನ ಕೊಟ್ಟೆ. ಯಡಿಯೂರಪ್ಪ ಹೇಳುವುದು ಒಂದು ಮಾಡುವುದು ಇನ್ನೊಂದು. ಸದನದಲ್ಲಿ ದ್ವೇಷ ರಾಜಕೀಯ ಮಾಡದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯಗೆ ಕೃತಜ್ಞತೆ  ಎಂದು ಹೇಳಿದ್ದರು.  ಆದರೆ 24 ಗಂಟೆಯಲ್ಲಿ ಸಿಬಿಐ ಅಂದ್ರು. ಇವಕ್ಕೆಲ್ಲ ನಾನು ಹೆದರುವುದಿಲ್ಲ, ಸಿಬಿಐ ಇಲ್ಲದಿದ್ರೆ ಅವರ ಅಪ್ಪನನ್ನು ಕರೆದುಕೊಂಡು ಬರಲಿ ಎಂದು ಸವಾಲು ಹಾಕಿದರು.

ಬಿಜೆಪಿ ಹೊಗಳುತ್ತ ಬಂದಿರುವ ಜಿಟಿ ದೇವೇಗೌಡರಿಗೂ ಟಾಂಗ್ ನೀಡಿದ ಕುಮಾರಸ್ವಾಮಿ, ಜಿಟಿಡಿ ಹೇಳಿಕೆಯ ತಿರುಗೇಟು ನೀಡಿದ ಮಾಜಿ ಸಿಎಂ  ಈ ಪಕ್ಷ ಉಳಿದು, ಬೆಳೆದುಕೊಂಡಿರುವುದು ಕಾರ್ಯಕರ್ತರಿಂದ. ನಾನೂ ಕೂಡ ಒಬ್ಬ ಕಾರ್ಯಕರ್ತ.

ಯಾರಾದರೂ ನನ್ನಿಂದಲೇ ಬೆಳೆದಿದೆ ಎಂದುಕೊಂಡರೆ ಅದು ಮೊಟ್ಟೆಕೋಳಿ ಕಥೆ ಆಗುತ್ತೆ. ಬಿಜೆಪಿ ಸರ್ಕಾರದಲ್ಲಿ ದ್ವೇಷದ ರಾಜಕಾರಣ ಎಂಬುದು ಅನಾಗರಿಕವಾಗಿ ನಡೆಯುತ್ತಿದೆ. ಬಹುಮತದ ಸರ್ಕಾರ ಯೋಜನೆ ರೂಪಿಸಿ ಹಣ ಹಂಚಿಕೆ ಮಾಡಿದ್ದ ಯೋಜನೆಗಳನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು