ಪಕ್ಷವನ್ನುಬೂತ್ ಮಟ್ಟದಿಂದ ಬಲಗೊಳಿಸುವಉದ್ದೇಶದಿಂದಅಕ್ಟೋಬರ್ನಲ್ಲಿ ಎರಡನೇ ಸುತ್ತಿನ, ನವೆಂಬರ್ನಲ್ಲಿಮೂರನೇ ಸುತ್ತಿನ, ಡಿಸೆಂಬರ್ ನಲ್ಲಿ ನಾಲ್ಕನೇ ಸುತ್ತಿನಪ್ರವಾಸ ನಡೆಸಲಾಗು ವುದು ಹಾಗೂ ಜನವರಿ ಅಂತ್ಯಕ್ಕೆಎಲ್ಲ ಕ್ಷೇತ್ರಗಳಲ್ಲಿ ಸಂಚಾರ
ಹುಬ್ಬಳ್ಳಿ(ಸೆ.29): ರಾಮನಗರ ಕ್ಷೇತ್ರದೊಂದಿಗೆ ನಮ್ಮ ಕುಟುಂಬ ಭಾವನಾತ್ಮಕ ಸಂಬಂಧ ಹೊಂದಿದೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಕುಮಾರ ಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಕುರಿತು ಯೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು. ಚಾರ
ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ತಾವು ಈ ಹಿಂದೆ ಮುಖ್ಯಮಂತ್ರಿಯಾಗಿದ್ದು ರಾಮನಗರದಿಂದ. ತಮ್ಮ ಕುಟುಂಬದ ಅನೇಕರು ಇಲ್ಲಿಂದ ಸ್ಪರ್ಧಿಸಿ, ಗೆದ್ದಿದ್ದಾರೆ. ಹೀಗಾಗಿ ಕ್ಷೇತ್ರದೊಂದಿಗೆ ಇರುವ ಭಾವನಾತ್ಮಕ ಸಂಬಂಧದಿಂದಾಗಿ ಕುಮಾರ ಸ್ವಾಮಿಯವರು ಇದೇ ಕ್ಷೇತ್ರದಿಂದ ಸ್ಪರ್ಧಿಸಬೇಕೋ ಅಥವಾ ಬೇರೆ ಕ್ಷೇತ್ರದಿಂದ ಕಣಕ್ಕಿಳಿಯ ಬೇಕೋ ಎಂಬ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದರು. ಪಕ್ಷವನ್ನು ಬೂತ್ ಮಟ್ಟದಿಂದ ಬಲಗೊಳಿಸುವ ಉದ್ದೇಶದಿಂದ ಅಕ್ಟೋಬರ್ನಲ್ಲಿ ಎರಡನೇ ಸುತ್ತಿನ, ನವೆಂಬರ್ನಲ್ಲಿ ಮೂರನೇ ಸುತ್ತಿನ, ಡಿಸೆಂಬರ್ ನಲ್ಲಿ ನಾಲ್ಕನೇ ಸುತ್ತಿನ ಪ್ರವಾಸ ನಡೆಸಲಾಗು ವುದು ಹಾಗೂ ಜನವರಿ ಅಂತ್ಯಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಸಂಚರಿಸಲಾಗುವುದು. ಜನವರಿಯೊಳಗೆ ಪಕ್ಷದಿಂದ ಸ್ಪರ್ಧಿಸುವ ಎಲ್ಲ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು