
ಹುಬ್ಬಳ್ಳಿ: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಜೆಡಿಎಸ್ಗೆ ಬಿಟ್ಟು ಕೊಡುವಂತೆ ಕಾಂಗ್ರೆಸ್ ಅನ್ನು ಆಗ್ರಹಿಸಲಾಗಿದೆ. ಆದರೆ, ನಾವೇನು ಅವರಲ್ಲಿ ಭಿಕ್ಷೆ ಕೇಳಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯದ ಶಾಸಕರ ಬಲವನ್ನು ನೋಡಿದರೆ ಕಾಂಗ್ರೆಸ್ಗೆ ಎರಡು, ಬಿಜೆಪಿಗೆ ಒಂದು ಸ್ಥಾನ ದಕ್ಕಲಿದೆ.
ಉಳಿದಿರುವ ಮತ್ತೊಂದು ಸ್ಥಾನ ನ್ಯಾಯಯುತವಾಗಿ ಜೆಡಿಎಸ್ಗೆ ಬರಬೇಕು. ಆದರೆ ಕೆಲವರು ಭಿನ್ನಮತ ಪ್ರದರ್ಶಿಸಿ ಹಿಂದೆ ಮೋಸ ಮಾಡಿದ್ದುಂಟು. ಹೀಗಾಗಿ ಕಾಂಗ್ರೆಸ್ಗೆ ಒಂದು ಸ್ಥಾನ ಬಿಟ್ಟು ಕೊಡುವಂತೆ ಕೇಳಲಾಗಿದೆ. ನಾವೇನು ಅವರಲ್ಲಿ ಭಿಕ್ಷೆ ಕೇಳಿಲ್ಲ. ನಮಗೆ ನ್ಯಾಯಯುತವಾಗಿ ಆ ಒಂದು
ಸ್ಥಾನ ಬರಬೇಕಿದೆ. ಒಂದು ವೇಳೆ ಮೂರೂ ಸ್ಥಾನಕ್ಕೆ ಕಾಂಗ್ರೆಸ್ನವರೇ ಸ್ಪರ್ಧಿಸಿದರೆ ನಮಗೂ ಒಂದು ಕಾಲ ಬರುತ್ತದೆ ಎಂದು ಸುಮ್ಮನಿರುತ್ತೇವೆ. ಸಮಯ ಬಂದಾಗ ಸೂಕ್ತ ಉತ್ತರ ಕೊಡುತ್ತೇವೆ ಎಂದು ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.