
ಬೆಂಗಳೂರು: ಖ್ಯಾತ ಗೀತ ರಚನೆಕಾರ, ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿರುವ ’ಗುಲ್ ಮೊಹರ್ ನುಡಿನೋಟಗಳು’ ಪುಸ್ತಕ ಬಿಡುಗಡೆ ಸಮಾರಂಭ ಇದೇ ಭಾನುವಾರ ಬೆಳಿಗ್ಗೆ 10.30 ಕ್ಕೆ ಬಸವನ ಗುಡಿಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾಹಿತಿ ಕೆ ಪಿ ರಾವ್ ಹಾಗೂ ಕತೆಗಾರ ಕೆ.ಎನ್ ಗಣೇಶಯ್ಯ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಭಾಷೆ, ಲಿಪಿ, ಕಲೆ, ಸಂಗೀತ, ವಿಜ್ಞಾನ, ಸಾಹಿತ್ಯಗಳು ಸಂಯುಕ್ತ ಆಸಕ್ತಿಯ ಪಯಣಿಗ, ನುಡಿ ತಂತ್ರಾಂಶದ ರುವಾರಿ ಎನ್ನುವ ವಿಚಾರದ ಬಗ್ಗೆ ಶ್ರೀ ಕೆ. ಪಿ ರಾವ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಖ್ಯಾತ ಕಥನಕಾರ, ಕೃಷಿ ವಿಜ್ಞಾನಿ ಕೆ. ಎನ್ ಗಣೇಶಯ್ಯ ಐತಿಹ್ಯಗಳನ್ನು ಮಾನವಿಕ ಆಸಕ್ತಿಯಿಂದ ನಿಮ್ಮ ಮುಂದೆ ವಿಸ್ತರಿಸಲಿದ್ದಾರೆ.
ಆಸಕ್ತರು 9.30 ಕ್ಕೆ ಬಂದರೆ ಕಾಫಿ ತಿಂಡಿ ಒಟ್ಟಿಗೆ ಮಾಡಬಹುದು. ಬನ್ನಿ, ಭಾಗವಹಿಸಿ. ಕಾರ್ಯಕ್ರಮವನ್ನು ಚಂದಗಾಣಿಸಿ.
ನಿಮ್ಮ ನಿರೀಕ್ಷೆಯಲ್ಲಿ,
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.