ತಮಿಳ್ನಾಡು ಗದ್ದುಗೆ ಏರಲು ಜಯಾ ಸ್ನೇಹಿತೆ ಶಶಿಕಲಾ ಷಡ್ಯಂತ್ರ..?

Published : Dec 05, 2016, 10:03 AM ISTUpdated : Apr 11, 2018, 12:36 PM IST
ತಮಿಳ್ನಾಡು ಗದ್ದುಗೆ ಏರಲು ಜಯಾ ಸ್ನೇಹಿತೆ ಶಶಿಕಲಾ ಷಡ್ಯಂತ್ರ..?

ಸಾರಾಂಶ

ಒಂದು ಬಣ ಪನ್ನೀರ್ ಸೆಲ್ವಂಗೆ ಪಟ್ಟ ನೀಡಲು ಬಯಸಿದ್ದರೆ, ಶಶಿಕಲಾ ಬಣ ಶಶಿಕಲಾಗೆ ಪಟ್ಟ ನೀಡುವಂತೆ ಪಟ್ಟು ಹಿಡಿದಿದೆ. ಎರಡೂ ಬಣಗಳ ನಡುವೆ ಶೀತಲ ಸಮರ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿಯೇ ಶಶಿಕಲಾ, ಜಯಲಲಿತಾ ಸಾವಿನ ಸುದ್ದಿಯನ್ನ ತೇಲಿಬಿಟ್ಟಿರಬಹುದು ಎನ್ನಲಾಗಿದೆ.

ಚೆನ್ನೈ(ಡಿ.05): ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆನ್ನಲ್ಲೇ ಅಣ್ಣಾಡಿಎಂಕೆ ಪಕ್ಷದಲ್ಲಿ ಅಧಿಕಾರಕ್ಕಾಗಿ ರಾಜಕೀಯ ಚದುರಂಗದಾಟ ಶುರುವಾಗಿದೆ. ಸಿಎಂ ಪಟ್ಟಕ್ಕೆ ಪಟ್ಟುಹಿಡಿದಿರುವ ಜಯಲಲಿತಾ ಸ್ನೇಹಿತೆ ಶಶಿಕಲಾ ಷಡ್ಯಂತ್ರ ನಡೆಸಿದ್ದಾಳೆ ಎಂಬ ಸ್ಫೋಟಕ ಮಾಹಿತಿ ಸುವರ್ಣ ನ್ಯೂಸ್`ಗೆ ಸಿಕ್ಕಿದೆ.

ಒಂದು ಬಣ ಪನ್ನೀರ್ ಸೆಲ್ವಂಗೆ ಪಟ್ಟ ನೀಡಲು ಬಯಸಿದ್ದರೆ, ಶಶಿಕಲಾ ಬಣ ಶಶಿಕಲಾಗೆ ಪಟ್ಟ ನೀಡುವಂತೆ ಪಟ್ಟು ಹಿಡಿದಿದೆ. ಎರಡೂ ಬಣಗಳ ನಡುವೆ ಶೀತಲ ಸಮರ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿಯೇ ಶಶಿಕಲಾ, ಜಯಲಲಿತಾ ಸಾವಿನ ಸುದ್ದಿಯನ್ನ ತೇಲಿಬಿಟ್ಟಿರಬಹುದು ಎನ್ನಲಾಗಿದೆ. ಇದೇ ಕಾರಣಕ್ಕೆ ಬೆಳಗ್ಗಿನಿಂದ ಎರಡು ಬಾರಿ ಶಾಸಕಾಂಗ ಸಭೆ ನಡೆದರೂ ಒಗ್ಗಟ್ಟು ಮೂಡಿಲ್ಲ.

ಶಶಿಕಲಾ ವರ್ತನೆಯಿಂದ ಪಕ್ಷದಲ್ಲೇ ಆಕ್ರೋಶ ಭುಗಿಲೆದ್ದಿದೆ ಎಂದು ತಿಳಿದುಬಂದಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ