ಬಿಜೆಪಿ ಸಭೆಯಲ್ಲಿ ಶಾಸಕರು, ಸಂಸದರ ಫುಲ್ ಕ್ಲಾಸ್​

Published : Dec 31, 2017, 03:33 PM ISTUpdated : Apr 11, 2018, 12:34 PM IST
ಬಿಜೆಪಿ ಸಭೆಯಲ್ಲಿ ಶಾಸಕರು, ಸಂಸದರ ಫುಲ್ ಕ್ಲಾಸ್​

ಸಾರಾಂಶ

ಅಮಿತ್​ ಶಾ ಅನುಪಸ್ಥಿತಿಯಲ್ಲೇ ಶಾಸಕರು, ಸಂಸದರಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್​ ಜಾವಡೇಕರ್​ ​ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.​​

ಬೆಂಗಳೂರು: ಅಮಿತ್​ ಶಾ ಅನುಪಸ್ಥಿತಿಯಲ್ಲೇ ಶಾಸಕರು, ಸಂಸದರಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್​ ಜಾವಡೇಕರ್​ ​ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.​​

ಜವಾಬ್ದಾರಿ ಕೊಟ್ಟ ಕ್ಷೇತ್ರಕ್ಕೆ ಯಾರು ಹೋಗಿದ್ದೀರಿ ಎಂದು ಜಾವಡೇಕರ್​ ಪ್ರಶ್ನೆ ಕೇಳಿದ್ದಾರೆ, ಆದರೆ  ಪ್ರಶ್ನೆಗೆ ಶಾಸಕರು, ಸಂಸದರಿಂದ ಸ್ಪಷ್ಟ ಉತ್ತರ ಸಿಗಲಿಲ್ಲ.

ಕ್ಷೇತ್ರಕ್ಕೆ ಯಾರೆಲ್ಲಾ  ಹೋಗಿಲ್ಲ ಎದ್ದು ನಿಲ್ಲಿ ಎಂದು ಸೂಚಿಸಿದ ಯಡಿಯೂರಪ್ಪ, ಎದ್ದು ನಿಂತು ಜವಾಬ್ದಾರಿ ನಿಭಾಯಿಸದೇ ಇರುವುದನ್ನು ಖಾತ್ರಿ ಪಡಿಸಿದರು.

ಕ್ಷೇತ್ರ ಉಸ್ತುವಾರಿ ವಹಿಸಿದ್ದರೂ ಕ್ಷೇತ್ರದತ್ತ ತಲೆ ಹಾಕದ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪರಿಂದ ಜಾವಡೇಕರ್ ವಿವರಣೆ ಪಡೆದಿದ್ದಾರೆ.

ಪರಿವರ್ತನಾ ಯಾತ್ರೆ, ಮದುವೆ ನೆಪ ಹೇಳಿದ ಸಂಸದರು, ಶಾಸಕರಿಗೆ ಜನವರಿ 15ರೊಳಗೆ ವರದಿ ಸಲ್ಲಿಸಬೇಕೆಂದು ಬಿಎಸ್​ವೈ ತಾಕೀತು ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬ್ಯಾಂಕ್‌ನಿಂದ ರೈತರವರೆಗೆ: ಜನವರಿ 2026ರಿಂದ ಬದಲಾಗುತ್ತಿರುವ ಪ್ರಮುಖ ನಿಯಮಗಳು
ರಾಜ್ಯದಾದ್ಯಂತ ಲೋಕಾಯುಕ್ತ ದಾಳಿ ಸರಣಿ: ವಿಜಯಪುರ, ರಾಯಚೂರು ಸೇರಿ ನಾಲ್ಕು ಜಿಲ್ಲೆಗಳಲ್ಲಿ ಭ್ರಷ್ಟರ ಭೇಟೆ!