2ಲಕ್ಷ ಭಾರತೀಯ ಟೆಕ್ಕಿಗಳಿಗೆ ಜಪಾನ್‌ ಭರ್ಜರಿ ಆಹ್ವಾನ!

Published : Mar 10, 2018, 08:50 AM ISTUpdated : Apr 11, 2018, 12:51 PM IST
2ಲಕ್ಷ ಭಾರತೀಯ ಟೆಕ್ಕಿಗಳಿಗೆ ಜಪಾನ್‌ ಭರ್ಜರಿ ಆಹ್ವಾನ!

ಸಾರಾಂಶ

ಭಾರತೀಯ ಟೆಕ್ಕಿಗಳ ವೀಸಾ ನಿಯಮಗಳನ್ನು ಅಮೆರಿಕ ಕಠಿಣಗೊಳಿಸಿದ ಬೆನ್ನಲ್ಲೇ, ಪ್ರಸ್ತುತ ವರ್ಷದಲ್ಲಿ 2 ಲಕ್ಷ ಭಾರತೀಯ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಜಪಾನ್‌ ವಿದೇಶಾಂಗ ವಾಣಿಜ್ಯ ಸಂಸ್ಥೆ(ಜೆಟ್ರೋ)ಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಶಿಗೆಕಿ ಮಾಯಿದಾ ತಿಳಿಸಿದ್ದಾರೆ. ಈ ಮೂಲಕ ಐಟಿ ಕ್ಷೇತ್ರ ಎದುರಿಸುತ್ತಿರುವ ಮಾನವ ಕೊರತೆಯನ್ನು ನಿವಾರಿಸುವುದಾಗಿ ಅವರು ತಿಳಿಸಿದ್ದಾರೆ.

ನವದೆಹಲಿ: ಭಾರತೀಯ ಟೆಕ್ಕಿಗಳ ವೀಸಾ ನಿಯಮಗಳನ್ನು ಅಮೆರಿಕ ಕಠಿಣಗೊಳಿಸಿದ ಬೆನ್ನಲ್ಲೇ, ಪ್ರಸ್ತುತ ವರ್ಷದಲ್ಲಿ 2 ಲಕ್ಷ ಭಾರತೀಯ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಜಪಾನ್‌ ವಿದೇಶಾಂಗ ವಾಣಿಜ್ಯ ಸಂಸ್ಥೆ(ಜೆಟ್ರೋ)ಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಶಿಗೆಕಿ ಮಾಯಿದಾ ತಿಳಿಸಿದ್ದಾರೆ. ಈ ಮೂಲಕ ಐಟಿ ಕ್ಷೇತ್ರ ಎದುರಿಸುತ್ತಿರುವ ಮಾನವ ಕೊರತೆಯನ್ನು ನಿವಾರಿಸುವುದಾಗಿ ಅವರು ತಿಳಿಸಿದ್ದಾರೆ.

ಬೆಂಗಳೂರು ಛೇಂಬರ್‌ ಆಫ್‌ ಇಂಡಸ್ಟ್ರಿ ಮತ್ತು ಜೆಟ್ರೋ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಾದ್ಯಂತ ಅತ್ಯಂತ ಮುಂದುವರಿಯುತ್ತಿರುವ ತಂತ್ರಜ್ಞಾನ ಅಭಿವೃದ್ಧಿಯಿಂದ ಜಪಾನ್‌ ಹಿಂದುಳಿದಿದೆ. ಇದನ್ನು ತಪ್ಪಿಸಲು 2 ಲಕ್ಷಕ್ಕಿಂತ ಹೆಚ್ಚು ಇಂಜಿನಿಯರ್‌ಗಳ ನೇಮಕಾತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಪಾನ್‌ನಲ್ಲಿ ನೆಲೆಸಲು ಭಾರತೀಯರಿಗೆ ಅಗತ್ಯವಿರುವ ಗ್ರೀನ್‌ ಕಾರ್ಡ್‌ ಸೇರಿದಂತೆ ಇತರ ಅನುಕೂಲಗಳನ್ನು ಮಾಡಿಕೊಡುವುದಾಗಿ ಭರವಸೆ ಇತ್ತಿದ್ದಾರೆ.

ಪ್ರಸ್ತುತ ಜಪಾನ್‌ನಲ್ಲಿ 9,20,000 ಐಟಿ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, 2030ರ ವೇಳೆಗೆ ಇನ್ನೂ 8 ಲಕ್ಷ ಟೆಕ್ಕಿಗಳ ಅವಶ್ಯಕತೆ ಎದುರಾಗಬಹುದು ಎನ್ನಲಾಗಿದೆ. ಆದರೆ, ಇದೀಗ ತ್ವರಿತಗತಿಯಲ್ಲಿ ಬದಲಾವಣೆಯಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಇನ್ನೂ 2 ಲಕ್ಷಕ್ಕಿಂತ ಹೆಚ್ಚು ಇಂಜಿನಿಯರ್‌ ಅವಶ್ಯಕವಿದ್ದು, 2 ಲಕ್ಷ ಭಾರತೀಯ ಟೆಕ್ಕಿಗಳನ್ನು ಜಪಾನ್‌ ಕಂಪನಿಗಳಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಿಗೆಕಿ ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್‌ ದೆವ್ವದ ಮನೆ, ದಿನಕ್ಕೊಂದು ಬಿಳಿ-ಕರಿ ದೆವ್ವ ಹೊರ ಬರ್ತಿವೆ: ಆರ್.ಅಶೋಕ್ ವ್ಯಂಗ್ಯ
ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ ನಿಯಮ ಶೀಘ್ರ ಜಾರಿ: ಸಚಿವ ಶಿವರಾಜ ತಂಗಡಗಿ