ಸಚಿವೆ ಸ್ಮೃತಿಗೆ ‘ಆಂಟಿ’ ಎಂದು ಕರೆದು ಕ್ಷಮೆ ಕೋರಿದ ಶ್ರೀದೇವಿ ಪುತ್ರಿ

Published : Dec 29, 2018, 07:41 AM IST
ಸಚಿವೆ ಸ್ಮೃತಿಗೆ ‘ಆಂಟಿ’ ಎಂದು ಕರೆದು ಕ್ಷಮೆ ಕೋರಿದ ಶ್ರೀದೇವಿ ಪುತ್ರಿ

ಸಾರಾಂಶ

ಸಚಿವೆ ಸ್ಮೃತಿ ಇರಾನಿಯನ್ನು ‘ಆಂಟಿ’ ಎಂದು ಕರೆದ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕ್ಷಮೆ ಕೋರಿದ ಘಟನೆ ನಡೆದಿದೆ.

ಮುಂಬೈ[ಡಿ.29]: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್‌ ಅವರು, ಸ್ಮೃತಿ ಅವರನ್ನು ‘ಆಂಟಿ’ ಎಂದು ಕರೆದು ಸುದ್ದಿ ಮಾಡಿದ್ದಾರೆ. ಬಳಿಕ, ಹೀಗೆ ಕರೆದಿದ್ದಕ್ಕೆ ಸ್ಮೃತಿ ಅವರಲ್ಲಿ ಕ್ಷಮೆಯನ್ನೂ ಯಾಚಿಸಿದ್ದಾರೆ!

ಸ್ಮೃತಿ ಅವರನ್ನು ‘ಟೆಲಿಗ್ರಾಫ್‌’ ಆಂಗ್ಲ ದೈನಿಕವು ‘ಆಂಟಿ ನ್ಯಾಷನಲ್‌’ ಎಂಬ ತಲೆಬರಹದಲ್ಲಿ ಈ ಹಿಂದೆ ಟೀಕಿಸಿತ್ತು. ಹೀಗಾಗಿ ಸ್ಮೃತಿ ಅವರಿಗೆ ಆಂಟಿ ಎಂದು ಕರೆದರೆ ಕೋಪ ಬರುತ್ತದಂತೆ.

ಆದರೆ ತಮ್ಮನ್ನು ಜಾಹ್ನವಿ ‘ಆಂಟಿ’ ಎಂದು ಕರೆದಿದ್ದನ್ನು ಖುದ್ದು ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿರುವ ಸ್ಮೃತಿ, ‘ಈಗಿನ ಕಾಲದ ಮಕ್ಕಳು ಏನೇನೋ ಮಾತಾಡ್ತವೆ. ಆಂಟಿ ಎಂದು ಕರೆದಿದ್ದಕ್ಕೆ ನನ್ನಲ್ಲಿ ಜಾಹ್ನವಿ ಕ್ಷಮೆ ಕೂಡ ಯಾಚಿಸಿದಳು’ ಎಂದು ಆಕೆಯ ಜತೆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರಭಾಸ್, ವಿಜಯ್, ಅಲ್ಲು ಅರ್ಜುನ್ ಯಾರೂ ಅಲ್ಲ.. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವುದು ಈ ನಟ!
ಮೀನುಗಾರ ಬಲೆಗೆ ಸಿಲುಕಿ ತೀರಕ್ಕೆ ಬಂದ ಭಾರಿ ಗಾತ್ರದ ಶಾರ್ಕ್‌: ವಾಪಸ್ ಸಮುದ್ರಕ್ಕೆ ಬಿಟ್ಟ ಕಡಲ ಮಕ್ಕಳು..