
ನೆಚ್ಚಿನ ನಾಯಕ ನಟನನ್ನು ಅಭಿಮಾನಿಗಳು ಆರಾದಿಸೋದು ನೋಡಿದಿವಿ. ಹೊಸ ಮನೆ ಕಟ್ಟಿದರೆ ಅದನ್ನು ಉದ್ಘಾಟನೆ ಮಾಡಬೇಕೆಂದು ಕಾದವರನ್ನು ನಾವು ನೋಡಿದಿವಿ. ಆದರೆ ಗಣಿನಾಡಿನಲ್ಲೊಬ್ಬ ನಾಯಕ ತನ್ನ ಆಪ್ತಮಿತ್ರನಿಗಾಗಿ ಶಬರಿಯಂತೆ ಕಾದಿದ್ದಾನೆ. ಅವರೇ ಸಂದಸ ಶ್ರೀರಾಮುಲು. ಹೌದು ಶ್ರೀರಾಮುಲು ಬರೋಬ್ಬರಿ 40 ಕೋಟಿ ವೆಚ್ಚದ;ಲ್ಲಿ ಬೃಹತ್ ಮನೆ ನಿರ್ಮಿಸಿದ್ದಾರೆ. ಆದರೆ, ಅದರ ಉದ್ಘಾಟನೆಗಾಗಗಿ ಗೆಳೆಯ ಜನಾರ್ದನ ರೆಡ್ಡಿ ಬರುವಿಕೆಗಾಗಿ ಕಾಯುತ್ತಿದ್ದರು. ಬಹುಕೋಟಿ ವೆಚ್ಚದ ನೂತನ ಮನೆಯನ್ನು ಜನಾರ್ದನ ರೆಡ್ಡಿ ಉದ್ಘಾಟಿಸಬೇಕು ಎಂಬ ಮಹಾದಾಸೆ ಹೊಂದಿದ್ದರು. ಅದರಂತೆ ಇವತ್ತು ರೆಡ್ಡಿ ಆಗಮಿಸಿ ಗೃಹಪ್ರವೇಶ ಮಾಡಿದರು. ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ, ನೂತನ ಮಧುಮಗಳು ಬ್ರಹ್ಮಿಣಿ, ಮಗ ಕಿರಿಟಿ ಸೇರಿದಂತೆ ಇಡೀ ರೆಡ್ಡಿ ಕುಟುಂಬ ಆಗಮಿಸಿ ಹರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.