ಅಧಿಕಾರಿಗಳು ಹೆಸರಿಸಿದ ಬಿಗ್ ಬಾಸ್ ಯಾರು?

Published : Dec 03, 2016, 02:55 PM ISTUpdated : Apr 11, 2018, 12:42 PM IST
ಅಧಿಕಾರಿಗಳು ಹೆಸರಿಸಿದ ಬಿಗ್ ಬಾಸ್ ಯಾರು?

ಸಾರಾಂಶ

ಅಧಿಕಾರಿಗಳು ಕೋಡ್​ ವರ್ಡ್​ನಲ್ಲಿ ಹೆಸರಿಸಿದ ಬಿಗ್ ಬಾಸ್ ಯಾರು, ಮೂವರು ಸಚಿವರಲ್ಲಿ ಒಬ್ಬರ ಹೆಸರನ್ನು ...

ಮಂಗಳೂರು(ಡಿ.3): ರಾಜ್ಯ ಸರ್ಕಾರದ ಅಧಿಕಾರಿಗಳಿಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ಕಾಳಧನ ಸಿಕ್ಕಿರುವುದು ರಾಜ್ಯದ ಇತಿಹಾಸದಲ್ಲೇ ಕರಾಳ ದಿನ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ವಿಷಾದ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, 152 ಕೋಟಿ ರೂ.ಗಳಲ್ಲಿ ಕಾಳಧನದ ಪ್ರಮಾಣ ಎಷ್ಟು ಎಂಬ ಬಗ್ಗೆ ವಿವರ ನೀಡುವಂತೆ ಆಗ್ರಹಿಸಿದ್ದಾರೆ. ಅಧಿಕಾರಿಗಳು ಕೋಡ್​ ವರ್ಡ್​ನಲ್ಲಿ ಹೆಸರಿಸಿದ ಬಿಗ್ ಬಾಸ್ ಯಾರು, ಮೂವರು ಸಚಿವರಲ್ಲಿ ಒಬ್ಬರ ಹೆಸರನ್ನು ಮಹದೇವಪ್ಪ ಎಂದು ಮಾಧ್ಯಮ ಹೆಸರಿಸಿದ್ದು, ಉಳಿದಿಬ್ಬರು ಯಾರು ಎಂದು ಪೂಜಾರಿ ಪ್ರಶ್ನಿಸಿದ್ದಾರೆ. ಇದರ ಪ್ರಮುಖ ರೂವಾರಿ ಸಿಎಂ ಎಂದು ರಾಜ್ಯದ ಜನ ಸಂಶಯ ಪಡುತ್ತಿದ್ದಾರೆ. ಸಂಜೆಯ ಒಳಗೆ ಈ ವಿಚಾರವನ್ನು ಸ್ಪಷ್ಟಪಡಿಸಿ ಇಲ್ಲವೇ ಹೈಕಮಾಂಡ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹೈಕಮಾಂಡ್ ಈ ವಿಚಾರದಲ್ಲಿ ಹಿಂದೇಟು ಹಾಕಿದರೆ ಅಕ್ರಮದಲ್ಲಿ ಅದಕ್ಕೂ ಪಾಲಿದೆ ಎಂಬ ಅರ್ಥ ಕಲ್ಪಿಸಲಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಒಂದು-ಎರಡು ಬಣಗಳೆರಡು..' ಹಾಡಿನ ಮೂಲಕ ಸರ್ಕಾರದ ಕಾಲೆಳೆದ ಅಭಯ್ ಪಾಟೀಲ್
ಎರಡು ತಿಂಗಳು ಇಂಟರ್ನ್‌ಶಿಪ್ ಮಾಡುವವರಿಗೆ 4 ಲಕ್ಷ ಸ್ಟೈಫಂಡ್ ಕೊಡುತ್ತದೆ ಈ ಕಾಲೇಜು