
ಶ್ರೀನಗರ(ಫೆ.21): ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕುವ ಕಾಯ್ದೆ ರೂಪಿಸಬೇಕು ಎಂದು ಇರುವ ಪ್ರಸ್ತಾಪ ಅನೇಕ ರಾಜ್ಯಗಳಲ್ಲಿ ಇನ್ನೂ ಪ್ರಸ್ತಾಪದ ಹಂತದಲ್ಲೇ ಇದೆ. ಆದರೆ ಜಮ್ಮು-ಕಾಶ್ಮೀರ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಈ ಬಗ್ಗೆ ಅನಿರೀಕ್ಷಿತವಾಗಿ ಅಧಿಸೂಚನೆ ಹೊರಡಿಸಿ ದುಂದುವೆಚ್ಚದ ಮದುವೆ, ಇತರ ಸಮಾರಂಭಗಳಿಗೆ ಕಡಿವಾಣ ಹಾಕಿದೆ.
ಅಧಿಸೂಚನೆಯ ಪ್ರಕಾರ, ಮಗನ ಮದುವೆಯಾದರೆ 400 ಹಾಗೂ ಮಗಳ ಮದುವೆಯಾದರೆ 500 ಜನರನ್ನು ಕರೆಯಲು ಅವಕಾಶವಿದೆ. ಇನ್ನು ನಿಶ್ಚಿತಾರ್ಥದಂಥ ಸಣ್ಣ ಸಮಾರಂಭಗಳಿಗೆ 100 ಅತಿಥಿಗಳ ಮಿತಿ ವಿಧಿಸಲಾಗಿದೆ.
ಯಾವುದೇ ಖಾಸಗಿ/ಸರ್ಕಾರಿ ಸಮಾರಂಭಗಳು ಇರಲಿ. ಅಲ್ಲಿ ಧ್ವನಿವರ್ಧಕ ಬಳಕೆ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಇನ್ನು ಏಪ್ರಿಲ್ 1ರಿಂದ ಆಮಂತ್ರಣ ಪತ್ರಿಕೆಗಳನ್ನು ನೀಡುವಾಗ ಅವುಗಳೊಂದಿಗೆ ಒಣಹಣ್ಣು (ಡ್ರೈಫ್ರೂಟ್ಸ್)ಗಳನ್ನು ನೀಡುವಂತಿಲ್ಲ.
ಇತ್ತೀಚೆಗೆ ಲೋಕಸಭೆಯಲ್ಲೂ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಅವರು ಇಂಥದ್ದೇ ಮಸೂದೆಯನ್ನು ಮಂಡಿಸಿದ್ದರು. 5 ಲಕ್ಷ ರು.ಗಳಿಗಿಂತ ಹೆಚ್ಚು ಖರ್ಚು ಮಾಡಿ ಮದುವೆ ಮಾಡುವವರು, ಆ ಮದುವೆಯ ಶೇ.10ರಷ್ಟು ಹಣವನ್ನು ಬಡ ಹುಡುಗಿಯರ ಮದುವೆಗೆ ಸಹಾಯ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದರು.
ಈ ಮಸೂದೆಯು ಲೋಕಸಭೆಯ ಬಜೆಟ್ ಅವೇಶನದ ದ್ವಿತೀಯ ಚರಣದಲ್ಲಿ ಚರ್ಚೆಗೆ ಬರುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.