
ನವದೆಹಲಿ (ಫೆ.25): ನೋಟು ಅಮಾನ್ಯ ಕ್ರಮವನ್ನು ಆರ್ಬಿಐ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದಿಲ್ಲ ಬದಲಾಗಿ ಸರ್ಕಾರವೇ ಆರ್ ಬಿಐ ಮೇಲೆ ಒತ್ತಡ ಹೇರಿದ್ದು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ.
ನೋಟು ನಿಷೇಧದ ಬಳಿಕ ಅಂದಾಜು 2400 ಕೋಟಿ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಆದರೆ ತಿಂಗಳಿಗೆ 300 ಕೋಟಿ ನೋಟುಗಳನ್ನು ಮಾತ್ರ ಮುದ್ರಿಸುವ ಸಾಮರ್ಥ್ಯವನ್ನು ಹೊಂದಿರುವಾಗ ಬಹುತೇಕ ಎಟಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನೂ ಕೂಡಾ ನಗದು ಕೊರತೆಯಿದೆ ಎಂದಿದ್ದಾರೆ.
ನೋಟು ಅಮಾನ್ಯದಿಂದ ಕಪ್ಪುಹಣ ವಾಪಸ್ ಬರುತ್ತದೆ ಎಂದು ಮೋದಿಯವರು ಹೇಳಿದ್ದರು ಆದರೆ ಪಂಜಾಬ್, ಉತ್ತರ ಪ್ರದೇಶ ಚುನಾವಣಾ ಸಂದರ್ಬದಲ್ಲಿ ಕೋಟ್ಯಾಂತರ ರೂಪಾಯಿ ಕಪ್ಪುಹಣವನ್ನು ವಶಪಡಿಸಿಕೊಳ್ಳಲಾಗಿದೆ. ದೇಶದಲ್ಲಿ ಇನ್ನೂ ಕಪ್ಪುಹಣವಿದೆಯೇ? ಉತ್ತರ ಪ್ರದೇಶದಲ್ಲಿ 121 ಕೋಟಿ, ಪಂಜಾಬ್ ನಲ್ಲಿ 70 ಕೋಟಿ ಸಿಕ್ಕಿದೆ. ಇದು ವೈಟ್ ಮನಿಯೇ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.