
ಬೆಂಗಳೂರು (ನ.10): ಐಟಿ ದಾಳಿ ಮಾಡಿ, ಅಧಿಕಾರಿಗಳ ಮೂಲಕ ಡಿಕೆಶಿ ಅವರಿಗೆ ಆಮಿಷ ಒಡ್ಡಿ, ಬಿಜೆಪಿಗೆ ಸೆಳೆಯಲಾಗುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಐಟಿ ಇಲಾಖೆ ಸ್ಪಷ್ಟನೆ ನೀಡಿದೆ.
ಕರ್ನಾಟಕ ಮತ್ತು ಗೋವಾ ತೆರಿಗೆ ಇಲಾಖೆ ಡಿಜಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಸಿಎಂ ಆರೋಪ ನಿರಾಕರಿಸಿದೆ. ಡಿ.ಕೆ.ಶಿವಕುಮಾರ್ ರನ್ನು ಬಿಜೆಪಿ ಸೇರಿ ಎಂಬ ಆಮಿಷದ ಆರೋಪದಲ್ಲಿ ಹುರುಳಿಲ್ಲ. ಬಿಜೆಪಿ ಸೇರಿ ಎಂದು ಐಟಿ ಅಧಿಕಾರಿಗಳು ಹೇಳುವ ಪ್ರಶ್ನೆಯೇ ಇಲ್ಲ. ಐಟಿ ಇಲಾಖೆ ವೃತ್ತಿಪರ ಮತ್ತು ರಾಜಕೀಯರಹಿತ ಇಲಾಖೆ ಎಂದು ಸಿಎಂಗೆ ಉತ್ತರಿಸಿದೆ. ಇನ್ನು ಡಿಕೆಶಿ ಮನೆ ದಾಳಿ ವೇಳೆ ಅಘೋಷಿತ ಆಸ್ತಿಪಾಸ್ತಿ ಪತ್ತೆಯಾಗಿದೆ. ಕೆಲ ಅಘೋಷಿತ ಆಸ್ತಿಪಾಸ್ತಿ ಬಗ್ಗೆ ಡಿಕೆಶಿಯಿಂದಲೇ ಒಪ್ಪಿ ಇದ್ದು, ಅಘೋಷಿತ ಆದಾಯದಿಂದ ನೂರಾರು ಕೋಟಿ ರೂಪಾಯಿ ಸಂಪಾದಿಸಲಾಗಿದೆ. ಲೆಕ್ಕಪತ್ರವಿಲ್ಲದ ಹಣ ಜಪ್ತಿ ಹಾಗೂ ಚಿನ್ನಾಭರಣ ಸಹ ಆಗಲೇ ವಶಕ್ಕೆ ಪಡೆಯಲಾಗಿದೆ ಎಂದು ಸಿಎಂ ಆರೋಪಕ್ಕೆ ಐಟಿ ಇಲಾಖೆ ಸ್ಪಷ್ಟನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.