ಏಪ್ರಿಲ್‌ನಲ್ಲಿ ಚಂದ್ರಯಾನ ಮುಹೂರ್ತ : ಬೇರಾವ ದೇಶವೂ ಹೋಗದ ಜಾಗಕ್ಕೆ ನೌಕೆ

Published : Feb 18, 2018, 08:52 AM ISTUpdated : Apr 11, 2018, 01:03 PM IST
ಏಪ್ರಿಲ್‌ನಲ್ಲಿ ಚಂದ್ರಯಾನ ಮುಹೂರ್ತ : ಬೇರಾವ ದೇಶವೂ ಹೋಗದ ಜಾಗಕ್ಕೆ ನೌಕೆ

ಸಾರಾಂಶ

ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-1 ನಡೆಸಿ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಚಂದ್ರಯಾನ-2 ಯಾತ್ರೆಗೆ ಮುಹೂರ್ತ ಅಂತಿಮಗೊಳಿಸಿದೆ.

ಬೆಂಗಳೂರು : ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-1 ನಡೆಸಿ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಚಂದ್ರಯಾನ-2 ಯಾತ್ರೆಗೆ ಮುಹೂರ್ತ ಅಂತಿಮಗೊಳಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಚಂದ್ರನ ಮೇಲೆ ರೋವರ್‌ (ಚಲಿಸುವ ಯಂತ್ರ) ಇಳಿಸುವುದಾಗಿ ಇಸ್ರೋ ಹೇಳಿಕೊಂಡಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್‌ ಇಳಿಸಲು ಇಸ್ರೋ ನಿರ್ಧರಿಸಿದ್ದು, ಈ ಜಾಗ ಲಕ್ಷಾಂತರ ವರ್ಷಗಳ ಹಿಂದೆ ರೂಪುಗೊಂಡ ಕಡಿದಾದ ಬಂಡೆಗಳಿಂದ ಕೂಡಿದೆ. ಜಗತ್ತಿನ ಬೇರಾವುದೇ ದೇಶದವರು ಈ ಭಾಗಕ್ಕೆ ನೌಕೆಯನ್ನು ಇಳಿಸಿಲ್ಲ. ಅವರೆಲ್ಲ ಹೆಚ್ಚಾಗಿ ಚಂದ್ರನ ಸಮಭಾಜಕ ಪ್ರದೇಶದ ಆಸುಪಾಸಿನಲ್ಲೇ ಸಂಶೋಧನೆ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಧ್ರುವದಲ್ಲಿ ಯಂತ್ರವನ್ನು ಇಳಿಸಲು ಇಸ್ರೋ ನಿರ್ಧರಿಸಿದ್ದು, ಅಲ್ಲಿ ನಡೆಸುವ ಸಂಶೋಧನೆಯಿಂದ ಜಗತ್ತಿನ ಉಗಮ ಹೇಗಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು ಎಂದು ಇಸ್ರೋದ ನೂತನ ಚೇರ್ಮನ್‌ ಕೆ. ಶಿವನ್‌ ಹೇಳಿದ್ದಾರೆ.

ಚಂದ್ರಯಾನ-1ರಲ್ಲಿ ಇಸ್ರೋ ಚಂದ್ರನ ಮೇಲೆ ಮೊಟ್ಟಮೊದಲ ಬಾರಿಗೆ ನೀರಿರುವುದನ್ನು ಪತ್ತೆಹಚ್ಚಿತ್ತು. ಅದು ಜಗತ್ತಿನಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ನಡೆಸಲಾದ ಚಂದ್ರಯಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇದೀಗ ಚಂದ್ರಯಾನ-2 ಯೋಜನೆಗೆ ಇಸ್ರೋ ಸುಮಾರು 800 ಕೋಟಿ ರು. ವೆಚ್ಚ ಮಾಡುತ್ತಿದೆ. ಚಂದ್ರಯಾನ ಕೈಗೊಳ್ಳಲು ಈ ವರ್ಷದ ಏಪ್ರಿಲ್‌ ಅಥವಾ ನವೆಂಬರ್‌ ತಿಂಗಳು ಪ್ರಶಸ್ತವಾಗಿವೆ. ಒಂದು ವೇಳೆ ಏಪ್ರಿಲ್‌ನಲ್ಲಿ ಸಾಧ್ಯವಾಗದೇ ಇದ್ದರೆ ನವೆಂಬರ್‌ನಲ್ಲಿ ನಡೆಸುವುದಾಗಿ ಇಸ್ರೋ ಹೇಳಿಕೊಂಡಿದೆ.

‘ಚಂದ್ರಯಾನ-2 ಯೋಜನೆಯು ಚಂದ್ರಯಾನ-1 ಯೋಜನೆಯ ಮುಂದುವರಿದ ಭಾಗ. ನಾವು ಚಂದ್ರನ ಮೇಲೆ ಇಳಿಸುತ್ತಿರುವ ನೌಕೆಯು ಚಂದ್ರನ ಮೇಲೆ ಮನುಷ್ಯನನ್ನು ಇಳಿಸಿದಷ್ಟೇ ನಿಖರ ಫಲಿತಾಂಶವನ್ನು ನೀಡುತ್ತದೆ’ ಎಂದು ಶಿವನ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು