ಹರ್ಯಾಣ ಹಿಂಸಾಚಾರ ಪೂರ್ವನಿಯೋಜಿತ?

Published : Aug 27, 2017, 01:12 PM ISTUpdated : Apr 11, 2018, 12:56 PM IST
ಹರ್ಯಾಣ ಹಿಂಸಾಚಾರ ಪೂರ್ವನಿಯೋಜಿತ?

ಸಾರಾಂಶ

ಬಾಬಾ ರಾಮ್ ರಹೀಂ ಸಿಂಗ್ ದೋಷಿಯೆಂದು ತೀರ್ಪು ಹೊರಬಿದ್ದ  ಬಳಿಕ  ನಡೆದ ಹಿಂಸಾಚಾರ ಪೂರ್ವನಿಯೋಜಿತವೇ ಎಂಬುದಕ್ಕೆ ಪುಷ್ಠಿ ನೀಡುವ ಆಡಿಯೋ ಕ್ಲಿಪ್ ಈಗ ಬಹಿರಂಗಗೊಂಡಿದೆ. ಸುವರ್ಣನ್ಯೂಸ್'ಗೆ ಲಭಿಸಿರುವ  ಆಡಿಯೋ ಕ್ಲಿಪ್'ನಲ್ಲಿ  ಬಾಬಾನ ಇಬ್ಬರು ಬೆಂಬಲಿಗರ ನಡುವೆ ನಡೆದ ಸಂಭಾಷಣೆ ದಾಖಲಾಗಿದ್ದು, ಬಾಬಾ ಹೆಸರು ಎಲ್ಲೂ ಹೊರಗೆ ಬರದಂತೆ ಎಚ್ಚರಿಕೆ ವಹಿಸಲಾಗಿದೆ.

ಚಂಡೀಗಢ: ಬಾಬಾ ರಾಮ್ ರಹೀಂ ಸಿಂಗ್ ದೋಷಿಯೆಂದು ತೀರ್ಪು ಹೊರಬಿದ್ದ  ಬಳಿಕ  ನಡೆದ ಹಿಂಸಾಚಾರ ಪೂರ್ವನಿಯೋಜಿತವೇ ಎಂಬುದಕ್ಕೆ ಪುಷ್ಠಿ ನೀಡುವ ಆಡಿಯೋ ಕ್ಲಿಪ್ ಈಗ ಬಹಿರಂಗಗೊಂಡಿದೆ.

ಸುವರ್ಣನ್ಯೂಸ್'ಗೆ ಲಭಿಸಿರುವ  ಆಡಿಯೋ ಕ್ಲಿಪ್'ನಲ್ಲಿ  ಬಾಬಾನ ಇಬ್ಬರು ಬೆಂಬಲಿಗರ ನಡುವೆ ನಡೆದ ಸಂಭಾಷಣೆ ದಾಖಲಾಗಿದ್ದು, ಬಾಬಾ ಹೆಸರು ಎಲ್ಲೂ ಹೊರಗೆ ಬರದಂತೆ ಎಚ್ಚರಿಕೆ ವಹಿಸಲಾಗಿದೆ.

ಮಾಧ್ಯಮಗಳು ಕೇಳಿದರೆ ಸ್ವಯಂ ಪ್ರೇರಿತವಾಗಿ ಬಂದಿದ್ದೇವೆ ಎಂದು ಹೇಳಿ, ಶಸ್ತ್ರಾಸ್ತ್ರಗಳನ್ನು ರೆಡಿಯಾಗಿಡಿ, ಯಾರಿಗೂ ತೋರಿಸಬೇಡಿ, ಅಗತ್ಯ ಬಿದ್ದಾಗ ಬಳಸೋಣ ಎಂದು ಚರ್ಚಿಸಲಾಗಿದೆ.

ತೀರ್ಪು ಹೊರಬೀಳುವ 3 ದಿನ ಮೊದಲೇ ಪಂಚಕುಲಾದಲ್ಲಿ ಸೇರಿದ್ದ ಬಾಬಾ ಬೆಂಬಲಿಗರು, ತೀರ್ಪು ನೀಡುವ ಮೊದಲೇ ಗಲಭೆ ನಡೆಸಲು ಬೆಂಬಲಿಗರ ಸ್ಕೆಚ್​​ ಹಾಕಿಕೊಂಡಿದ್ದರು ಎಂಬುವುದು ಈ ಸಂಭಾಷಣೆಯಲ್ಲಿ ತಿಳಿದು ಬರುತ್ತದೆ.

ಬಾಬಾ ರಾಮ್ ರಹೀಂ ಸಿಂಗ್ ದೋಷಿಯೆಂದು ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿ ಬಳಿಕ ನಡೆದ ಹಿಂಸಾಚಾರದಲ್ಲಿ ಸುಮಾರು 26 ಮಂದಿ ಬಲಿಯಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?