ಬೆಂಗಳೂರಿನ ಕೆರೆಗಳ ಪುನಶ್ಚೇತನಕ್ಕೆ ಏನು ದಾರಿ? ಟೌನ್'ಹಾಲ್'ನಲ್ಲಿ ಚರ್ಚಾಕೂಟ

Published : May 12, 2017, 05:24 AM ISTUpdated : Apr 11, 2018, 01:11 PM IST
ಬೆಂಗಳೂರಿನ ಕೆರೆಗಳ ಪುನಶ್ಚೇತನಕ್ಕೆ ಏನು ದಾರಿ? ಟೌನ್'ಹಾಲ್'ನಲ್ಲಿ ಚರ್ಚಾಕೂಟ

ಸಾರಾಂಶ

ಯುನೈಟೆಡ್ ಬೆಂಗಳೂರು ಸಂಸ್ಥೆಯು ಮೇ 13, ಶನಿವಾರದಂದು ಟೌನ್'ಹಾಲ್'ನಲ್ಲಿ ಚರ್ಚಾ ಕಾರ್ಯಕ್ರಮ ಏರ್ಪಡಿಸಿದೆ. ಸಿಟಿಜನ್ಸ್ ಫಾರ್ ಬೆಂಗಳೂರು, ನಮ್ಮ ಬೆಂಗಳೂರು ಫೌಂಡೇಶನ್, ಸಿಟಿಜನ್ ಆ್ಯಕ್ಷನ್ ಫೋರಮ್, ಫಾರ್ವರ್ಡ್ ಫೌಂಡೇಶನ್, ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಪ್ರಜಾ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗಿವೆ. ಅಲ್ಲದೇ, ನಗರದ ಪರಿಸರವಾದಿಗಳು, ಕೆರೆ ಪುನಶ್ಚೇತನ ಹೋರಾಟಗಾರರು, ಇನ್ನೂ ಅನೇಕ ನಾಗರಿಕ ಸಂಘಟನೆಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿವೆ.

ಬೆಂಗಳೂರು(ಮೇ 12): ಈ ನಗರ ಕೆಲ ದಶಕಗಳ ಹಿಂದಿನವರೆಗೂ ಕೆರೆಗಳ ನಗರವೆಂದೆನಿಸಿಕೊಂಡಿತ್ತು. ನಗರ ಬೆಳೆದಂತೆಲ್ಲಾ ಕೆರೆಗಳ ಅತಿಕ್ರಮಣವಾಗಿ ಝಗಮಗಿಸುವ ಲೇಔಟ್'ಗಳಾಗಿವೆ. ಕೆರೆಗಳಿಲ್ಲದಿರುವುದರಿಂದ ಬೆಂಗಳೂರಿನ ಅಂತರ್ಜಲ ಬರಿದಾಗಿದೆ. ಸ್ವಲ್ಪ ಮಳೆ ಬಂದರೂ ಪ್ರವಾಹ ಪರಿಸ್ಥಿತಿ ಎದುರಾಗುವಷ್ಟು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ವರ್ಷವಿಡೀ ಏರ್'ಕಂಡೀಶನರ್ ರೀತಿಯ ವಾತಾವರಣ ಹೊಂದಿದ್ದ ಬೆಂಗಳೂರಿನಲ್ಲಿ ಬಿಸಿಲಿನ ಬೇಗೆಯಿಂದ ಜನರು ಬೇಯುವಂತಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ನಗರವನ್ನು ಶತಾಯಗತಾಯ ಉಳಿಸಿಕೊಳ್ಳುವ ತುರ್ತು ಸಂದರ್ಭ ಬಂದಿದೆ. ಕೆರೆಗಳ ಪುನಶ್ಚೇತನ ಹಾಗೂ ಸಂರಕ್ಷಣೆ ನಡೆಸುವ ಬಗ್ಗೆ ನಾಗರಿಕರಿಂದ ಚರ್ಚಾಕೂಟವನ್ನು ಏರ್ಪಡಿಸಲಾಗಿದೆ.

ಯುನೈಟೆಡ್ ಬೆಂಗಳೂರು ಸಂಸ್ಥೆಯು ಮೇ 13, ಶನಿವಾರದಂದು ಟೌನ್'ಹಾಲ್'ನಲ್ಲಿ ಚರ್ಚಾ ಕಾರ್ಯಕ್ರಮ ಏರ್ಪಡಿಸಿದೆ. ಸಿಟಿಜನ್ಸ್ ಫಾರ್ ಬೆಂಗಳೂರು, ನಮ್ಮ ಬೆಂಗಳೂರು ಫೌಂಡೇಶನ್, ಸಿಟಿಜನ್ ಆ್ಯಕ್ಷನ್ ಫೋರಮ್, ಫಾರ್ವರ್ಡ್ ಫೌಂಡೇಶನ್, ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಪ್ರಜಾ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗಿವೆ. ಅಲ್ಲದೇ, ನಗರದ ಪರಿಸರವಾದಿಗಳು, ಕೆರೆ ಪುನಶ್ಚೇತನ ಹೋರಾಟಗಾರರು, ಇನ್ನೂ ಅನೇಕ ನಾಗರಿಕ ಸಂಘಟನೆಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿವೆ.

ಚರ್ಚಾ ವಿಷಯ: ಕೆರೆಗಳ ಪುನಶ್ಚೇತನ ಮತ್ತು ರಕ್ಷಣೆ
ಸ್ಥಳ: ಟೌನ್ ಹಾಲ್, ಬೆಂಗಳೂರು
ಸಮಯ: ಮೇ 13, ಬೆಳಗ್ಗೆ 10ಗಂಟೆಯಿಂದ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌