ಮಧ್ಯರಾತ್ರಿ ಧ್ವಜಾರೋಹಣ ವೇಳೆ ಆಯೋಜಕರಿಂದ ಮಹಾ ಯಡವಟ್ಟು: ಶಿವಾಜಿ ಸರ್ಕಲ್'ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ

Published : Aug 15, 2017, 08:40 AM ISTUpdated : Apr 11, 2018, 01:13 PM IST
ಮಧ್ಯರಾತ್ರಿ ಧ್ವಜಾರೋಹಣ ವೇಳೆ ಆಯೋಜಕರಿಂದ ಮಹಾ ಯಡವಟ್ಟು: ಶಿವಾಜಿ ಸರ್ಕಲ್'ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ

ಸಾರಾಂಶ

ಭಾರತಕ್ಕೆ ಸ್ವತಂತ್ರ ಸಿಕ್ಕ ದಿನವಾದ ಇಂದು ಮದ್ಯರಾತ್ರಿ ವಿಜಯಪುರದ ಶಿವಾಜಿ ಸರ್ಕಲ್'ನಲ್ಲಿ ಧ್ವಜಾರೋಹಣ ನಡೆಸಲಾಯಿತು. ಆದರೆ ಧ್ವಜಾರೋಹಣದ ವೇಳೆ ಆಯೋಜಕರಿಂದ ಮಹಾ ಯಡವಟ್ಟು ನಡೆದಿದೆ. ಯಾಕಂದ್ರೆ ಧ್ವಜಾರೋಹಣ ನಡೆಸಿದ್ದ ವೇಳೆ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿದ್ದು ಅಪಮಾನ ಮಾಡಿದಂತಾಗಿದೆ.

ಬೆಂಗಳೂರು(ಆ.15): ಭಾರತಕ್ಕೆ ಸ್ವತಂತ್ರ ಸಿಕ್ಕ ದಿನವಾದ ಇಂದು ಮದ್ಯರಾತ್ರಿ ವಿಜಯಪುರದ ಶಿವಾಜಿ ಸರ್ಕಲ್'ನಲ್ಲಿ ಧ್ವಜಾರೋಹಣ ನಡೆಸಲಾಯಿತು. ಆದರೆ ಧ್ವಜಾರೋಹಣದ ವೇಳೆ ಆಯೋಜಕರಿಂದ ಮಹಾ ಯಡವಟ್ಟು ನಡೆದಿದೆ. ಯಾಕಂದ್ರೆ ಧ್ವಜಾರೋಹಣ ನಡೆಸಿದ್ದ ವೇಳೆ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿದ್ದು ಅಪಮಾನ ಮಾಡಿದಂತಾಗಿದೆ.

ಜಿಟಜಿಟಿ ಮಳೆ ಸುರಿಯುತ್ತಿದ್ದರೂ ಸಹ ಅಖಿಲ ಭಾರತ ವಿದ್ಯಾರ್ಥಿ ಪರಿಷತ್'ನಿಂದ ಧ್ವಜಾರೋಹಣ ನಡೆಸಲಾಯಿತು. ಮಧ್ಯರಾತ್ರಿ ಸ್ವಾತಂತ್ರ್ಯ ಸಿಕ್ಕಿದ್ದರಿಂದ ದೇಶಭಕ್ತರೆಲ್ಲ ಸೇರಿ ಇಲ್ಲಿನ ಶಿವಾಜಿ ಸರ್ಕಲ್ ನಲ್ಲಿ ಪ್ರತೀ ವರ್ಷ ರಾತ್ರಿ 12ಗಂಟೆಗೆ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಧ್ವಜವನ್ನು ಕಟ್ಟುವಾಗಲೇ ಸರಿಯಾಗಿ ಪರಿಶೀಲನೆ ನಡೆಸದಿರುವುದರಿಂದ ಯಡವಟ್ಟು ನಡೆದಿದೆ.

ಹೀಗಾಗಿ ದೇಶಾಭಿಮಾನಕ್ಕೆ ಧ್ವಜಾರೋಹಣ ನಡೆಸಿದ್ರೂ ಅಚಾತುರ್ಯದಿಂದಾಗಿ ಧ್ವಜ ಉಲ್ಟಾ ಹಾರಿದ್ದು ಮಾತ್ರ ರಾಷ್ಟ್ರಕ್ಕೆ ಮಾಡಿದ ಅಪಮಾನವಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ರಮಕ್ಕೆ ಅವಕಾಶವೇ ಇಲ್ಲ! ಕೆಇಎ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು: ಹೇಗಿದೆ ಗೊತ್ತಾ ಇಂದಿನ ಸಿದ್ಧತೆ?
ಬೆಂಗಳೂರು : ನಗರದ 35 ರಸ್ತೆಗಳಲ್ಲಿ ಇನ್ನು ಪೇ ಆ್ಯಂಡ್‌ ಪಾರ್ಕ್‌